ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲೆಗಡುಗ ಮರ ಬಾಲಕನ ತಿಂದು ಉರುಳಿಬಿತ್ತು !

By Staff
|
Google Oneindia Kannada News

ಕೊಲೆಗಡುಗ ಮರ ಬಾಲಕನ ತಿಂದು ಉರುಳಿಬಿತ್ತು !
ಮೈಸೂರು ಮೃಗಾಲಯದಲ್ಲಿನ ನಲಿವಿನ ವಿಹಾರ ನೋವಿನಲ್ಲಿ ಅಂತ್ಯ

ಮೈಸೂರು : ನಗರದ ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ಬೃಹತ್‌ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ನಾಲ್ಕು ವರ್ಷದ ಪುಟಾಣಿ ಮೃತಪಟ್ಟಿದ್ದು, ಮೂರು ಮಂದಿ ಮಕ್ಕಳು ಗಾಯಗೊಂಡಿದ್ದಾರೆ.

ಇಲ್ಲಿನ ರಾಜೀವ್‌ನಗರದ ಪ್ಲೇಹೋಂನ ಹನ್ನೊಂದು ಮಕ್ಕಳನ್ನು ಗುರುವಾರ ಇಬ್ಬರು ಶಿಕ್ಷಕಿಯಲು ಮೃಗಾಲಯಕ್ಕೆ ಕರೆತಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಪ್ರಾಣಿ ಪಕ್ಷಿಗಳನ್ನು ಸಂತಸದಿಂದ ವೀಕ್ಷಿಸಿ ಊಟದ ಚೀಲಗಳನ್ನು ತರಲು, ಪ್ರವೇಶದ್ವಾರದತ್ತ ಮಕ್ಕಳು ತೆರಳುತ್ತಿದ್ದಾಗ ದಿಢೀರನೇ 40 ಅಡಿ ಎತ್ತರದ ಸಿಲ್ವರ್‌ ಓಕ್‌ ಮರ ಮಧ್ಯಕ್ಕೆ ಮುರಿದು ಬಿತ್ತು.

ಮೃತಪಟ್ಟ ಮಗುವನ್ನು ಮಗ್ದುಂ ಎಂದು ಗುರ್ತಿಲಾಗಿದೆ. ಮೃತಪಟ್ಟ ಮಗುವಿನ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 10ಸಾವಿರ ರೂ.ಗಳನ್ನು ನೀಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X