ಅವೈಜ್ಞಾನಿಕ ತೆರಿಗೆ ವಿಧಾನದಿಂದ ಸಂಕಷ್ಟ -ಮೊಯಿಲಿ
ಅವೈಜ್ಞಾನಿಕ
ತೆರಿಗೆ
ವಿಧಾನದಿಂದ
ಸಂಕಷ್ಟ
-ಮೊಯಿಲಿ
ಮಹಾನಗರ
ಪಾಲಿಕೆಯ
ಆಸ್ತಿ
ತೆರಿಗೆ
ಯೋಜನೆ
:
ವಿಚಾರ
ಸಂಕಿರಣ
ನಗರದ ಯವನಿಕಾ ಸಭಾಂಗಣದಲ್ಲಿ ಸಿಟಿಜನ್ಸ್ ವಾಯ್ಸ್ ಆಯೋಜಿಸಿದ್ದ ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ-ತಿದ್ದುಪಡಿ ಮಸೂದೆ 2005’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಯಂ ಆಸ್ತಿ ಘೋಷಣೆ ನಿಜಕ್ಕೂ ಶ್ರೇಷ್ಠ ಯೋಜನೆ ಜೊತೆಗೆ ಆಕರ್ಷಕ. ಆದರೆ ಅದರ ಅನುಷ್ಠಾನದಲ್ಲಿನ ಲೋಪದೋಷಗಳಿಂದಾಗಿ, ಅದು ವಿಫಲವಾಗಿದೆ. ರಸ್ತೆ, ಬಡಾವಣೆಗಳ ಪ್ರಾಮುಖ್ಯತೆಯನ್ನು ಗುರ್ತಿಸಿ ವೈಜ್ಞಾನಿಕವಾಗಿ ತೆರಿಗೆ ನಿಗದಿ ಪಡಿಸಿದರೆ, ಸಾರ್ವಜನಿಕರು ಚಕಾರವೆತ್ತುವುದಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮನಬಂದಂತೆ ತೆರಿಗೆ ನಿಗದಿಪಡಿಸಿದರೆ ಅದು ಏಕಸ್ವಾಮ್ಯವಾಗುತ್ತದೆ ಎಂದು ವೀರಪ್ಪ ಮೊಯಿಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅಡ್ವೋಕೇಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಎಲ್.ಜಗದೀಶ್ ಮಾತನಾಡಿ, ಮಹಾನಗರ ಪಾಲಿಕೆ ಬೆಂಗಳೂರು ನಾಗರಿಕರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಪಾಲಿಕೆಯ ಆಸ್ತಿ-ತೆರಿಗೆ ನೀತಿ ಪಾರದರ್ಶಕವಾಗಿಲ್ಲ ಎಂದರು.
ಒಂದೆಡೆ ಆಸ್ತಿ ತೆರಿಗೆ ಹೆಚ್ಚಿಸಿರುವ ಪಾಲಿಕೆ, ಇನ್ನೊಂದೆಡೆ ತನ್ನ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಸರಕಾರದ ವೈಫಲ್ಯಕ್ಕೆ ನಾಗರೀಕರನ್ನು ಬಲಿಪಶುಗಳಾಗಿದ್ದಾರೆ. ನ್ಯೂಯಾರ್ಕ್ ಮತ್ತಿತರ ನಗರಗಳಂತೆಯೇ ಬೆಂಗಳೂರಿನಲ್ಲೂ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಬೆಂಗಳೂರು ನಗರದ ವಾಸ್ತವ ಸ್ಥಿತಿಯ ಅಧ್ಯಯನಕ್ಕೆ ಸರಕಾರ 200ಕೋಟಿ ಹಣವನ್ನು ವ್ಯಯಿಸುತ್ತಿದೆ. 55ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ಬಗ್ಗೆ ಯಾರಿಗೂ ಸ್ಪಷ್ಟ ಕಲ್ಪನೆಯಿಲ್ಲದಿರುವುದೇ ಎಲ್ಲಾ ಗೊಂದಲಗಳಿಗೂ ಕಾರಣ ಎಂದು ಜಗದೀಶ್ ಅಭಿಪ್ರಾಯಪಟ್ಟರು.
ಜನಾಗ್ರಹ ಆಂದೋಲನದ ಸಮನ್ವಯಾಧಿಕಾರಿ ರಮೇಶ್ ರಾಮನಾಥನ್, ಮಹಾನಂದಿ ಸುರೇಶ್, ಕರ್ನಾಟಕ ಸರಕಾರದ ಮಾಜಿ ಮುಖ್ಯಕಾರ್ಯದರ್ಶಿ ಎ.ರವೀಂದ್ರ, ವಕೀಲ ಎಸ್.ಡಿ.ದೇವರಾಜು ತಮ್ಮ ವಿಚಾರಗಳನ್ನು ಮಂಡಿಸಿದರು.
ಪ್ರತಿಯಾಂದಕ್ಕೂ ಸರಕಾರ ಸುಂಕ ವಿಧಿಸುವ ಕ್ರಮ ಸೂಕ್ತವೇ? ತೆರಿಗೆ ಪ್ರಮಾಣ ಎಷ್ಟಿರಬೇಕು? ವಾಹನಗಳ ಮೇಲೆ ಉಪಕರ ಸರಿಯೇ? ತೆರಿಗೆಯ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆಯೇ ಎಂಬ ಮಹತ್ವದ ವಿಚಾರಗಳು ವಿಚಾರ ಸಂಕಿರಣದಲ್ಲಿ ಚರ್ಚಿಸಲ್ಪಟ್ಟವು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು