‘ಗೌಪ್ಯತೆ ಗಾಳಿಗೆ ತೂರಿದ ಸರ್ಕಾರ ಅಧಿಕಾರ ತ್ಯಜಿಸಲಿ’
‘ಗೌಪ್ಯತೆ
ಗಾಳಿಗೆ
ತೂರಿದ
ಸರ್ಕಾರ
ಅಧಿಕಾರ
ತ್ಯಜಿಸಲಿ’
ದೇವೇಗೌಡರಿಗೆ
ಸರ್ಕಾರಿ
ದಸ್ತಾವೇಜಿನ
ಮಾಹಿತಿ
ನೀಡಿಲ್ಲ
-ಪಿ.ಜಿ.ಆರ್.ಸಿಂಧ್ಯ
ವಿಧಾನಸಭೆಯಲ್ಲಿ ಗುರುವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಜನತೆ ಈ ಸರ್ಕಾರವನ್ನು ತಿರಸ್ಕರಿಸಿದೆ ಎಂದರು.
ಈ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಿದ ಶಾಸಕ ಮಾಧುಸ್ವಾಮಿ, ಈ ಸರ್ಕಾರ ಕೆಟ್ಟ ಸಂಪ್ರದಾಯವನ್ನು ಹುಟ್ಟುಹಾಕಿದೆ. ಅಸಂವಿಧಾನಿಕ ನೀತಿಗೆ ಅವಕಾಶ ಮಾಡಿ, ಸರ್ಕಾರಿ ದಸ್ತಾವೇಜಿನ ಮಾಹಿತಿಯನ್ನು ದೇವೇಗೌಡರಿಗೆ ತಿಳಿಸುವ ಮೂಲಕ ಗೌಪ್ಯತೆಯನ್ನು ಬದಿಗೆ ಸರಿಸಿದೆ. ಧರ್ಮಸಿಂಗ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಮಾಧುಸ್ವಾಮಿ ಒತ್ತಾಯಕ್ಕೆ ಶಾಸಕರಾದ ಕೆ.ಎಸ್.ಈಶ್ವರಪ್ಪ, ಜಯಪ್ರಕಾಶ್ ಹೆಗ್ಡೆ, ವಾಟಾಳ್ ನಾಗರಾಜ್, ಜಿ.ವಿ.ಶ್ರೀರಾಮರೆಡ್ಡಿ ದನಿಗೂಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪಿ.ಜಿ.ಆರ್.ಸಿಂಧ್ಯಾ, ನಿನ್ನೆಯ ಕಲಾಪಗಳ ಕುರಿತ ಸರ್ಕಾರಿ ದಸ್ತಾವೇಜನ್ನು ಮುಖ್ಯಮಂತ್ರಿಗಳು ದೇವೇಗೌಡರ ಪರಿಶೀಲನೆಗೆ ಕೊಟ್ಟಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಷಯ. ಇದು ಕೇವಲ ಇಬ್ಬರ ನಡುವಿನ ಸೌಜನ್ಯದ ಭೇಟಿಯಾಗಿತ್ತು ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು