ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಬೆತ್ತಲೆ ಪ್ರಕರಣ :ವಿ.ಪರಿಷತ್ತಿನಲ್ಲಿ ಪ್ರತಿಧ್ವನಿ

By Staff
|
Google Oneindia Kannada News

ಉಡುಪಿ ಬೆತ್ತಲೆ ಪ್ರಕರಣ :ವಿ.ಪರಿಷತ್ತಿನಲ್ಲಿ ಪ್ರತಿಧ್ವನಿ
ಗೋಹತ್ಯೆ ಬಗ್ಗೆ ಸರಕಾರ ಗಮನಹರಿಸಲಿ -ಕೆ.ಎಸ್‌.ಈಶ್ವರಪ್ಪ

ಉಡುಪಿ : ಮಲ್ಪೆ ಪೋಲೀಸ್‌ ಠಾಣೆ ವ್ಯಾಪ್ತಿಯ ಮೂಡಬೆಟ್ಟು ಎಂಬಲ್ಲಿ ಇಬ್ಬರನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಮಂಗಳವಾರ ನಾಲ್ವರನ್ನ ಬಂಧಿಸಿದ್ದಾರೆ.

ಮಾಂಸಕ್ಕಾಗಿ ಹೋರಿ ಕರುವನ್ನು ಸಾಗಿಸುತ್ತಿದ್ದರು ಎಂಬ ಕಾರಣಕ್ಕೆ ಗುಂಪೊಂದು ಸಾರ್ವಜನಿಕವಾಗಿ ಹಾಜಬ್ಬ ಮತ್ತು ಆತನ ಮಗ ಹಸನಬ್ಬನನ್ನು ಭಾನುವಾರ ಬೆತ್ತಲೆಗೊಳಿಸಿ ತೀವ್ರವಾಗಿ ಥಳಿಸಿದ್ದರು.

ಪ್ರತಿಧ್ವನಿ : ಈ ವಿಚಾರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಗೋಹತ್ಯೆ ನಿಷೇಧವಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಗೋಹತ್ಯೆಗಳ ಬಗ್ಗೆ ಪೋಲೀಸರು ನಿರ್ಲಕ್ಷ್ಯವಹಿಸುವುದರಿಂದ ಇಂತಹ ಪ್ರಕರಣಗಳು ಸಂಭವಿಸುತ್ತವೆ ಎಂದು ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಆಭಿಪ್ರಾಯಪಟ್ಟರು.

ಅಮಾನವೀಯವಾಗಿ ಬೆತ್ತಲೆಗೊಳಿಸಿದ್ದನ್ನು ಖಂಡಿಸಿದ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಕ್ರಿಯೆ ಸಲ್ಲದು. ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಬೆತ್ತಲೆ ಪ್ರಕರಣಕ್ಕೆ ಸಂಘ ಪರಿವಾರವೇ ಕಾರಣ ಎಂದು ಗುಂಪೊಂದು ಉಡುಪಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದೆ.
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X