ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್‌, ಗೋವಾ : ಸಂಸತ್ತಿನಲ್ಲಿ ಮತ್ತೆ ಗದ್ದಲ

By Staff
|
Google Oneindia Kannada News

ಜಾರ್ಖಂಡ್‌, ಗೋವಾ : ಸಂಸತ್ತಿನಲ್ಲಿ ಮತ್ತೆ ಗದ್ದಲ
ಎರಡೂ ರಾಜ್ಯಗಳ ರಾಜ್ಯಪಾಲರನ್ನು ವಜಾಗೊಳಿಸಲು ಆಗ್ರಹ

ನವದೆಹಲಿ : ಜಾರ್ಖಂಡ್‌ ಮತ್ತು ಗೋವಾ ರಾಜ್ಯಗಳ ರಾಜಕೀಯ ಬೆಳವಣಿಗೆಗಳು ಹಾಗೂ ಎನ್‌ಡಿಎ ಪ್ರತಿರೋಧದಿಂದಾಗಿ, ಸತತ ನಾಲ್ಕನೆಯ ದಿನವೂ ಸಂಸತ್ತಿನ ಎರಡೂ ಸದನಗಳಲ್ಲಿ ಶುಕ್ರವಾರ ಕಲಾಪ ಮುಂದೂಡಲ್ಪಟ್ಟಿದೆ.

ಸದನ ಆರಂಭವಾಗುತ್ತಿದ್ದಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್‌. ಕೆ.ಅಡ್ವಾಣಿ ಅವರು, ಎರಡೂ ರಾಜ್ಯಗಳ ರಾಜ್ಯಪಾಲರನ್ನು ವಾಪಸು ಕರೆಸಿಕೊಳ್ಳುವಂತೆ ಒತ್ತಾಯಿಸಿದರು.

ಜಾರ್ಖಂಡ್‌ನ 41 ಶಾಸಕರ ನಿಯೋಗ ನಿನ್ನೆ ರಾಷ್ಟ್ರಪತಿ ಅವರನ್ನು ಭೇಟಿಮಾಡಿದೆ. ಅವರಿಗೆ ಜನಾದೇಶವನ್ನು ಕಡೆಗಣಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ ಎಂದು ಆಡ್ವಾಣಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ, ಎನ್‌ಡಿಎ ಸಂಸದರು ಎದ್ದುನಿಂತು ಘೋಷಣೆಗಳನ್ನು ಕೂಗುತ್ತ ಕೂಡಲೇ ಇಬ್ಬರೂ ರಾಜ್ಯಪಾಲರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

ಪದೇಪದೇ ಕಲಾಪವನ್ನು ಮುಂದೂಡುವ ಪ್ರಕ್ರಿಯೆಗೆ ಬೇಸತ್ತ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು, ನಾನು ಒತ್ತಾಯಪೂರ್ವಕವಾಗಿ ಕಲಾಪವನ್ನು ಮುಂದೂಡಬೇಕಾಗಿದೆ. ಪ್ರಜಾಪ್ರಭುತ್ವವನ್ನು ಹಾಳುಗೆಡವಲು ನಾನು ಬಿಡಲಾರೆ ಎಂದರು.

ಶಿವರಾತ್ರಿ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರದ ಬದಲಿಗೆ ಸದನವನ್ನು ಬುಧವಾರದವರೆಗೆ ಮುಂದೂಡಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X