ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸರುಘಟ್ಟದಲ್ಲಿ ಚಿತ್ರನಗರಿ, ಮತ್ತೆ ಚಿಗುರಿದೆ ಕನಸು!

By Staff
|
Google Oneindia Kannada News

ಹೆಸರುಘಟ್ಟದಲ್ಲಿ ಚಿತ್ರನಗರಿ, ಮತ್ತೆ ಚಿಗುರಿದೆ ಕನಸು!
ಕಂಠೀರವ ಸ್ಪುಡಿಯೋ ಮಾರಾಟ ಪ್ರಕ್ರಿಯೆ ಸಲ್ಲದು -ಎಚ್‌.ಡಿ.ಗಂಗರಾಜು

ಬೆಂಗಳೂರು : ಚಿತ್ರನಗರಿ ನಿರ್ಮಾಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಶೀಘ್ರದಲ್ಲಿಯೇ ಯೋಜನೆಗೆ ಸಂಬಂಧಿಸಿದ ನೀಲಿ ನಕ್ಷೆಯನ್ನು ಸರಕಾರಕ್ಕೆ ಸಲ್ಲಿಸುವುದಾಗಿ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರನಗರಿ ನಿರ್ಮಾಣದ ಜೊತೆಯಲ್ಲಿಯೇ ಕಂಠೀರವ ಸ್ಟುಡಿಯೋ ಮಾರಾಟ ಮಾಡದಂತೆ ಸರಕಾರದ ಮನವೊಲಿಸುವುದಾಗಿ ಹೇಳಿದರು.

ಚಿತ್ರನಗರಿ ನಿರ್ಮಾಣ ಕಾರ್ಯದ ಹೊಣೆಯನ್ನು ನಿರ್ಮಾಪಕ ಸಿ.ವಿ.ಎಲ್‌.ಶಾಸ್ತ್ರಿಯವರಿಗೆ ಒಪ್ಪಿಸಲಾಗುವುದು. ರಾಮೋಜಿ ರಾವ್‌ ಸ್ಟುಡಿಯೋ ವಿನ್ಯಾಸವನ್ನು ರೂಪಿಸಿದ ಕಲಾನಿರ್ದೇಶಕ ನಿತೀಶ್‌ ರಾಯ್‌ರನ್ನು ಈ ಯೋಜನೆಗೆ ಬಳಸಿಕೊಳ್ಳುವುದಾಗಿ ತಿಳಿಸಿದರು.

ಬೆಳಕು : ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದಲ್ಲಿ ಚಿತ್ರನಗರಿ ಕಟ್ಟುವ ಕನಸು ನೆನೆಗುದಿಗೆ ಬಿದ್ದಿತ್ತು. 1989ರಲ್ಲಿಯೇ ಚಿತ್ರನಗರಿ ನಿರ್ಮಾಣದ ನೀಲಿ ನಕ್ಷೆ ರೂಪೂಗೊಂಡಿದ್ದು, ವಿವಿಧ ಕಾರಣಗಳಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಉದ್ದೇಶಕ್ಕಾಗಿ 400ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ.

ನಗರದ ಹೊರವಲಯದ ಹೆಸರುಘಟ್ಟದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಮುಂದಾಗಿದೆ. ಚಿತ್ರೋದ್ಯಮದ ಬಹುದಿನಗಳ ಕನಸು ಮತ್ತೆ ಚಿಗುರಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X