ಹೆಸರುಘಟ್ಟದಲ್ಲಿ ಚಿತ್ರನಗರಿ, ಮತ್ತೆ ಚಿಗುರಿದೆ ಕನಸು!
ಹೆಸರುಘಟ್ಟದಲ್ಲಿ
ಚಿತ್ರನಗರಿ,
ಮತ್ತೆ
ಚಿಗುರಿದೆ
ಕನಸು!
ಕಂಠೀರವ
ಸ್ಪುಡಿಯೋ
ಮಾರಾಟ
ಪ್ರಕ್ರಿಯೆ
ಸಲ್ಲದು
-ಎಚ್.ಡಿ.ಗಂಗರಾಜು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರನಗರಿ ನಿರ್ಮಾಣದ ಜೊತೆಯಲ್ಲಿಯೇ ಕಂಠೀರವ ಸ್ಟುಡಿಯೋ ಮಾರಾಟ ಮಾಡದಂತೆ ಸರಕಾರದ ಮನವೊಲಿಸುವುದಾಗಿ ಹೇಳಿದರು.
ಚಿತ್ರನಗರಿ ನಿರ್ಮಾಣ ಕಾರ್ಯದ ಹೊಣೆಯನ್ನು ನಿರ್ಮಾಪಕ ಸಿ.ವಿ.ಎಲ್.ಶಾಸ್ತ್ರಿಯವರಿಗೆ ಒಪ್ಪಿಸಲಾಗುವುದು. ರಾಮೋಜಿ ರಾವ್ ಸ್ಟುಡಿಯೋ ವಿನ್ಯಾಸವನ್ನು ರೂಪಿಸಿದ ಕಲಾನಿರ್ದೇಶಕ ನಿತೀಶ್ ರಾಯ್ರನ್ನು ಈ ಯೋಜನೆಗೆ ಬಳಸಿಕೊಳ್ಳುವುದಾಗಿ ತಿಳಿಸಿದರು.
ಬೆಳಕು : ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದಲ್ಲಿ ಚಿತ್ರನಗರಿ ಕಟ್ಟುವ ಕನಸು ನೆನೆಗುದಿಗೆ ಬಿದ್ದಿತ್ತು. 1989ರಲ್ಲಿಯೇ ಚಿತ್ರನಗರಿ ನಿರ್ಮಾಣದ ನೀಲಿ ನಕ್ಷೆ ರೂಪೂಗೊಂಡಿದ್ದು, ವಿವಿಧ ಕಾರಣಗಳಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಉದ್ದೇಶಕ್ಕಾಗಿ 400ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ.
ನಗರದ ಹೊರವಲಯದ ಹೆಸರುಘಟ್ಟದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಮುಂದಾಗಿದೆ. ಚಿತ್ರೋದ್ಯಮದ ಬಹುದಿನಗಳ ಕನಸು ಮತ್ತೆ ಚಿಗುರಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು