ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಅಂತ್ಯದೊಳಗೆ ಅರ್ಹರಿಗೆ ಹಳದಿ ಪಡಿತರ ಚೀಟಿ

By Staff
|
Google Oneindia Kannada News

ಮೇ ಅಂತ್ಯದೊಳಗೆ ಅರ್ಹರಿಗೆ ಹಳದಿ ಪಡಿತರ ಚೀಟಿ
ರಾಜ್ಯದಲ್ಲಿ 79ಲಕ್ಷ ಮಂದಿ ಬಡತನರೇಖೆಗಿಂತಲೂ ಕೆಳಗಿದ್ದಾರೆ -ಎಚ್‌.ಎಸ್‌.ಮಹದೇವಪ್ರಸಾದ್‌

ಚಿತ್ರದುರ್ಗ : ಅರ್ಹ ಫಲಾನುಭವಿಗಳಿಗೆ ಮೇ ಅಂತ್ಯದ ವೇಳೆಗೆ ಹಳದಿ ಪಡಿತರ ಚೀಟಿಗಳನ್ನು ವಿತರಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಫಲಾನುಭವಿಗಳನ್ನು ಗುರ್ತಿಸಲು ನಡೆಸಲಾಗುತ್ತಿರುವ ಆಧ್ಯಯನ ಕಾರ್ಯ ಏಪ್ರಿಲ್‌ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.

ಸುಮಾರು 79 ಸಾವಿರ ಬಡ ಕುಟುಂಬಗಳು ಬಡತನರೇಖೆಗಿಂತಲೂ ಕೆಳಗಿವೆ ಎಂಬ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಸರ್ವೆಯಲ್ಲಿ ತಪ್ಪುಗಳು ನುಸುಳದಂತೆ ಎಚ್ಚರವಹಿಸಲಾಗಿದೆ ಎಂದು ಮಹದೇವಪ್ರಸಾದ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X