ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಬಲಿ

By Staff
|
Google Oneindia Kannada News

ಗ್ರಾಮ ಪಂಚಾಯತಿ ಚುನಾವಣೆಯ ಮೊದಲ ಬಲಿ
ಕುಕ್ಕುಂದೂರು ಅಭ್ಯರ್ಥಿ ದಿವಾಕರ್‌ ಶೆಟ್ಟಿಯ ಭೀಕರ ಹತ್ಯೆ

ಮಣಿಪಾಲ್‌ : ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿ ದಿವಾಕರ್‌ ಶೆಟ್ಟಿ ಯನ್ನು ಕಾರ್ಕಳ ಬಳಿಯ ನಾಕ್ರೆಯಲ್ಲಿ ಬುಧವಾರ ರಾತ್ರಿ ಭೀಕರವಾಗಿ ಹತ್ಯೆಗೈಯಲಾಗಿದೆ.

ಉಡುಪಿ ಜಿಲ್ಲೆಯಿಂದ 30 ಕಿ.ಮೀ.ದೂರದಲ್ಲಿರುವ ಕಾರ್ಕಳ ಸಮೀಪ ಈ ಘಟನೆ ನಡೆದಿದೆ. ಚುನಾವಣಾ ವೈಷಮ್ಯವೇ 38 ವರ್ಷದ ದಿವಾಕರ್‌ ಶೆಟ್ಟಿ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಗುರುವಾರ ಈ ಪ್ರಕರಣವನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.

ಫೆಬ್ರವರಿ 27ರಂದು ನಡೆಯಲಿರುವ ಚುನಾವಣೆಯಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತನ್ನು ದಿವಾಕರ್‌ ಪ್ರತಿನಿಧಿಸಿದ್ದರು.

ಹತ್ಯೆಗೈದಿರುವ ತಂಡ ನಾಪತ್ತೆಯಾಗಿದೆ. ಪ್ರಕರಣ ದಾಖಲಿಸಿರುವ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X