ಬೆಂಗಳೂರಿಗೆ ಮತ್ತೊಂದು ರಿಂಗ್ರೋಡ್ -ಧರಂ
ಬೆಂಗಳೂರಿಗೆ
ಮತ್ತೊಂದು
ರಿಂಗ್ರೋಡ್
-ಧರಂ
ಶಾಂತಿನಗರದಲ್ಲಿ
ಬಿಎಂಟಿಸಿಯ
ಬಸ್ಟರ್ಮಿನಸ್
ಸೇವೆ
ಆರಂಭ
ನಗರದ ಕೆ.ಎಚ್.ರಸ್ತೆ(ಶಾಂತಿನಗರ)ಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ನಿರ್ಮಿಸಿರುವ ನೂತನ ಬಸ್ ಟರ್ಮಿನಸ್ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸದ ಅನಂತಕುಮಾರ್ ಮಾತನಾಡಿ, ಪ್ರತಿನಿತ್ಯ 30ಲಕ್ಷ ಮಂದಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ಹೀಗಾಗಿ ಮುಂದೆ ನಿರ್ಮಾಣವಾಗಲಿರುವ ಮೆಟ್ರೊರೈಲು ನಿಲ್ದಾಣಕ್ಕೆ ಬಸ್ಗಳ ಮಾರ್ಗವನ್ನು ಜೋಡಿಸ ಬೇಕೆಂದು ಸಲಹೆ ನೀಡಿದರು.
ಅತ್ಯಾಧುನಿಕ ನಿಲ್ದಾಣ : ಏಳು ಎಕರೆ ವಿಸ್ತೀರ್ಣದ ಈ ಬಸ್ ಟರ್ಮಿನಸ್ನಿಂದ ಕಲಾಸಿಪಾಳ್ಯ ಮತ್ತು ಕೆಂಪೇಗೌಡ ಬಸ್ ನಿಲ್ದಾಣದ ಒತ್ತಡ ಕಡಿಮೆಯಾಗಲಿದೆ. 23.50ಕೋಟಿ ಅಂದಾಜಿನ ಟರ್ಮಿನಸ್ನಲ್ಲಿ 28ಪ್ಲಾಟ್ ಫಾರ್ಮ್ಗಳಿವೆ. ನಾಲ್ಕು ಅಂತಸ್ತುಗಳ ಭವ್ಯ ಕಟ್ಟದ ಪಂಚತಾರಾ ಹೋಟೆಲ್ನಂತೆ ಎದ್ದುನಿಂತಿದೆ.
ಜಯನಗರ, ಜೆ.ಪಿ.ನಗರ, ಬನಶಂಕರಿ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯತ್ತ ತೆರಳುವವರಿಗೆ ಈ ಬಸ್ ಟರ್ಮಿನಸ್ ಪೂರಕವಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ