ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಸಗಸೆ ಬೆಳೆಗೆ ಪರವಾನಗಿ ನೀಡಿ: ಕೇಂದ್ರಕ್ಕೆ ಆಗ್ರಹ
ಗಸಗಸೆ
ಬೆಳೆಗೆ
ಪರವಾನಗಿ
ನೀಡಿ:
ಕೇಂದ್ರಕ್ಕೆ
ಆಗ್ರಹ
ಅಕ್ರಮವಾಗಿ
ಗಸಗಸೆ
ಬೆಳೆದ
ರೈತರನ್ನು
ಸರಕಾರ
ಶಿಕ್ಷಿಸುವುದಿಲ್ಲ
-ಕೆ.ಶ್ರೀನಿವಾಸಗೌಡ
ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಗಸಗಸೆ ಬೆಳೆಯಲು ರೈತರಿಗೆ ಕೇಂದ್ರ ಪರವಾನಗಿ ನೀಡಿದೆ. ರಾಜ್ಯದ ರೈತರಿಗೂ ಆ ಅವಕಾಶ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದರು.
ಕೋಲಾರ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಪೋಲೀಸರು ಅನಧಿಕೃತವಾಗಿ ಗಸಗಸೆ ಬೆಳೆದ ರೈತರ ತೋಟಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸರಕಾರ ಈ ದಿಕ್ಕಿನಲ್ಲಿ ಯೋಚಿಸುತ್ತಿದೆ. ಕಡಿಮೆ ನೀರು ಮತ್ತು ಹೆಚ್ಚು ಆದಾಯ ತರುವ ಈ ಕೃಷಿ ರೈತರಿಗೆ ವರದಾನವಾಗಲಿದೆ ಎಂದರು.
ಗಸಗಸೆ ಬೆಳೆದ ಅಮಾಯಕ ರೈತರಿಗೆ ತಮ್ಮ ತಪ್ಪಿನ ಅರಿವಿಲ್ಲ. ಹೀಗಾಗಿ ಸರಕಾರ ಮೆದು ನೀತಿ ಅನುಸರಿಸಲಿದೆ. ಆದರೆ ಇದರ ಬೆನ್ನಲ್ಲಿ ವ್ಯಾಪಕ ಜಾಲವಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದು ಶ್ರೀನಿವಾಸಗೌಡ ಹೇಳಿದರು.
ಮಾದಕ ಪದಾರ್ಥಗಳ ತಯಾರಿಕೆಗೆ ಗಸಗಸೆ ಬಳಕೆಯಾಗುತ್ತದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, February 17, 2005, 23:53 [IST]