ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಜಯದೇವ ಫ್ಲೈಓವರ್‌ ಕಥೆಯೇನು?

By Staff
|
Google Oneindia Kannada News

ಬೆಂಗಳೂರಿನ ಜಯದೇವ ಫ್ಲೈಓವರ್‌ ಕಥೆಯೇನು?
ಕೇಂದ್ರ ರೇಷ್ಮೆ ಮಂಡಳಿ ವೃತ್ತದಿಂದ ಬನಶಂಕರಿ ರಸ್ತೆವರೆಗೆ ಮೇಲು ಸೇತುವೆ: ಬಿಡಿಎಯ ಐದನೇ ಕೊಡುಗೆ

ಬೆಂಗಳೂರು : ನಗರದ ರಸ್ತೆ ಸಂಚಾರವನ್ನು ಸುಗಮಗೊಳಿಸುವ ಮತ್ತೊಂದು ಮೇಲುಸೇತುವೆ ಬುಧವಾರದಿಂದ ತನ್ನ ಸೇವೆಯನ್ನು ಆರಂಭಿಸಿದೆ.

ಸುಮಾರು 21ಕೋಟಿ ವೆಚ್ಚದ ಜಯದೇವ ವೃತ್ತದ ಬಳಿ 515.5ಮೀಟರ್‌ ಉದ್ದರ ಮೇಲುಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ಗುಲಾಂನಬಿ ಆಜಾದ್‌ ಉದ್ಘಾಟಿಸಿದರು.

ಕೇಂದ್ರ ರೇಷ್ಮೆ ಮಂಡಳಿ(ಸಿಲ್ಕ್‌ಬೋರ್ಡ್‌)ವೃತ್ತದಿಂದ ಬನಶಂಕರಿ ರಸ್ತೆವರೆಗಿನ ವಾಹನ ಸಂಚಾರ, ಈ ಮೇಲು ಸೇತುವೆಯಿಂದ ಸುಗಮವಾಗಲಿದೆ ಎನ್ನಲಾಗಿದೆ. ಕಾಮಗಾರಿ ಇನ್ನೂ ಅಪೂರ್ಣಗೊಂಡಿರುವ ಕಾರಣ, ಅದರ ಪರಿಣಾಮ ಜನತೆಗಿನ್ನು ದಕ್ಕಿಲ್ಲ. ಡೈರಿ ವೃತ್ತದಲ್ಲಿ ಮೇಲು ಸೇತುವೆಯಿದ್ದರೂ ಟ್ರಾಫಿಕ್‌ ಕಿರಿಕಿರಿ ಕಡಿಮೆಯಾಗಿಲ್ಲ. ಈ ಮೇಲು ಸೇತುವೆ ಕತೆಯೂ ಅಷ್ಟೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕಳೆದ ಎರಡು ವರ್ಷಗಳಿಂದ ಮೇಲುಸೇತುವೆ ಕಾಮಗಾರಿ ನಡೆಯುತ್ತಿದ್ದ ಕಾರಣ, ಹೊಸೂರು ರಸ್ತೆ, ಬಿಟಿಎಂ ಬಡಾವಣೆ, ಜಯನಗರ, ಬನಶಂಕರಿ ರಸ್ತೆಗಳನ್ನು ಟ್ರಾಫಿಕ್‌ಜಾಮ್‌ ಅತಿ ಸಾಮಾನ್ಯ ದೃಶ್ಯವಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X