ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಾ ಅಬೂಬಕ್ಕರ್‌, ದತ್ತಣ್ಣನಿಗೆ ಸಂದೇಶ ಪ್ರಶಸ್ತಿ

By Staff
|
Google Oneindia Kannada News

ಸಾರಾ ಅಬೂಬಕ್ಕರ್‌, ದತ್ತಣ್ಣನಿಗೆ ಸಂದೇಶ ಪ್ರಶಸ್ತಿ
ಮಂಗಳೂರಿನ ಸಂದೇಶ ಪ್ರತಿಷ್ಠಾನದ ಪ್ರಶಸ್ತಿಗಳು ಪ್ರಕಟ

ಮಂಗಳೂರು : ಪ್ರಸಕ್ತ ಸಾಲಿನ ಸಂದೇಶ ಸಾಂಸ್ಕೃತಿಕ ಮತ್ತು ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿಗೆ ಲೇಖಕಿ ಸಾರಾ ಅಬೂಬಕ್ಕರ್‌, ನಟ ಎಚ್‌.ಜಿ. ದತ್ತಾತ್ರೇಯ ಸೇರಿದಂತೆ ಒಂಬತ್ತು ಮಂದಿ ಆಯ್ಕೆಗೊಂಡಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೆಬ್ರವರಿ 24ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಚಿತ್ರನಿರ್ದೇಶಕ ಆಡೂರು ಗೋಪಾಲ ಕೃಷ್ಣನ್‌ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರಶಸ್ತಿ ಗಳನ್ನು ವಿತರಿಸುವರು.

ಪ್ರಶಸ್ತಿಗಳ ವಿವರ ಹೀಗಿದೆ :

  • ಸಾರಾ ಅಬೂಬಕ್ಕರ್‌(ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ)
  • ಮಾಯ್ಕಲ್‌ ಮೆಕ್ಸಿಮ್‌ ಡಿ’ಸೋಜಾ(ಕೊಂಕಣಿ ಸಾಹಿತ್ಯ ಪ್ರಶಸ್ತಿ)
  • ಡಾ.ವಾಮನ ನಂದಾದರ (ತುಳು ಸಾಹಿತ್ಯ ಪ್ರಶಸ್ತಿ)
  • ಎಚ್‌.ಜಿ.ದತ್ತಾತ್ರೇಯ (ಚಲನಚಿತ್ರ-ಕಿರುತೆರೆ ಪ್ರಶಸ್ತಿ)
  • ಕಿಲ್ಲೆಕ್ಯಾತ ದೊಡ್ಡಭರಮಪ್ಪ ಬಳ್ಳಾರಿ (ಕಲಾ ಪ್ರಶಸ್ತಿ)
  • ಡಾ.ವಿಜಯಾ (ಪತ್ರಿಕೋದ್ಯಮ ಪ್ರಶಸ್ತಿ)
  • ಪ್ರಾದೇಶಿಕ ಅಧ್ಯಯನ ಕೇಂದ್ರ ಉಡುಪಿ(ಮಾಧ್ಯಮ ಶಿಕ್ಷಣ ಪ್ರಶಸ್ತಿ )
  • ಸುಮುಖಾನಂದ ಜಲವಳಿ (ಶಿಕ್ಷಕ /ಶಿಕ್ಷಕಿ ಪ್ರಶಸ್ತಿ)
ವಿಶೇಷ ಪ್ರಶಸ್ತಿಗೆ ಪಾತ್ರರಾದವರು : ರಂಗಕಲಾ ಸೇವೆಗಾಗಿ ಬಳ್ಳಾರಿ ಸುಭದ್ರಮ್ಮ ಮನ್ಸೂರ್‌, ಸಮಾಜಸೇವೆಗೆ ಬಾಗಲಕೋಟೆಯ ಘನಶ್ಯಾಮ್‌ ಟಿ. ಭಾಂಗಡೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X