ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದ್ದರ್‌, ವರವರ ರಾವ್‌ ವಿರುದ್ಧ ದೂರು ದಾಖಲು

By Staff
|
Google Oneindia Kannada News

ಗದ್ದರ್‌, ವರವರ ರಾವ್‌ ವಿರುದ್ಧ ದೂರು ದಾಖಲು
ಬಂದೂಕಿಗೆ ಬಂದೂಕು ಉತ್ತರವಲ್ಲ ಎಂದಿದ್ದವರ ಬಂಧನ, ಗೌರಿಲಂಕೇಶ್‌ ಬಂಧನಕ್ಕೆ ಆಗ್ರಹ

ಬೆಂಗಳೂರು : ಪೋಲೀಸರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಆಂಧ್ರದ ಕ್ರಾಂತಿಕಾರಿ ಕವಿಗಳಾದ ಗದ್ದರ್‌ ಮತ್ತು ವರವರ ರಾವ್‌ ವಿರುದ್ಧ ಪಾವಗಡ ಮತ್ತು ತಿರುಮಣಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ರಾಜ್ಯ ಹೆಚ್ಚುವರಿ ಪೋಲೀಸ್‌ ಮಹಾ ನಿರ್ದೇಶಕ ಸುಭಾಷ್‌ ಭರಣಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೇಮ್‌ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಗದ್ದರ್‌ ಮತ್ತು ವರವರರಾವ್‌ ಬಂದೂಕಿಗೆ ಬಂದೂಕಿನಿಂದಲೇ ಉತ್ತರ ನೀಡುವುದಾಗಿ ಬೆದರಿಕೆ ಹಾಕಿದ್ದರು. ಆ ಬೆನ್ನಲ್ಲಿಯೇ ಪೋಲೀಸರ ಹತ್ಯೆ ಸಂಭವಿಸಿದೆ ಎಂದರು.

ಅಲ್ಲದೇ ಶಾಂತಿಗಾಗಿ ನಾಗರಿಕ ವೇದಿಕೆ ಪದಾಧಿಕಾರಿಗಳಾದ ಗೌರಿ ಲಂಕೇಶ್‌, ನಗರಿ ಬಾಬಯ್ಯ ಮತ್ತು ಪ್ರೊ. ವಿ. ಎಸ್‌.ಶ್ರೀಧರ್‌ ಮೇಲೂ ಪ್ರಕರಣ ದಾಖಲಿಸುವುದಾಗಿ ಭರಣಿ ಹೇಳಿದರು.

ಪ್ರಚೋದನೆ : ಗದ್ದರ್‌ ಮತ್ತು ವರವರರಾವ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌120(ಬಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪ ರುಜುವಾತಾದರೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶಗಳಿವೆ.

ದನಿ ಸೇರಿಸಿದ ಬಿಜೆಪಿ : ಶಾಂತಿಯ ಹೆಸರಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಶಾಂತಿಗಾಗಿ ನಾಗರೀಕ ವೇದಿಕೆ ಪದಾಧಿಕಾರಿಗಳ ಬಂಧಿಸಬೇಕು. ನಕ್ಸಲರಿಗೆ ಕಡಿವಾಣ ಹಾಕದಿದ್ದರೆ, ಕರ್ನಾಟಕ ಮತ್ತೊಂದು ಆಂಧ್ರ ಅಥವಾ ಬಿಹಾರವಾಗುವುದು ಖಚಿತ ಎಂದು ರಾಜ್ಯ ಬಿಜೆಪಿ ಅಭಿಪ್ರಾಯಪಟ್ಟಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X