ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಂಗಾ-ಕಾವೇರಿ’ಬೆಸೆಯುವ ಮೂರ್ಖತನ ಬೇಡ-ಬಹುಗುಣ

By Staff
|
Google Oneindia Kannada News

‘ಗಂಗಾ-ಕಾವೇರಿ’ಬೆಸೆಯುವ ಮೂರ್ಖತನ ಬೇಡ-ಬಹುಗುಣ
ಕಾಳಿ, ಶರಾವತಿ ನದಿಗಳನ್ನು ಉಳಿಸಿಕೊಳ್ಳದಿದ್ದರೆ ದೊಡ್ಡ ಅಪಾಯ

ಬೆಂಗಳೂರು : ಗಂಗಾ-ಕಾವೇರಿ ಜೋಡಣೆಯಿಂದ ಗುತ್ತಿಗೆದಾರರಿಗೆ ಲಾಭವಾಗುವುದೇ ಹೊರತು, ಮತ್ತೇನು ಪ್ರಯೋಜನವಿಲ್ಲ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಹಿಮ ಕಡಿಮೆಯಾಗುತ್ತಿದ್ದು, ಮುಂದೊಂದು ದಿನ ಈ ಯೋಜನೆ ನಿಷ್ಟ್ರಯೋಜಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚಿಪ್ಕೋ ಚಳವಳಿಯ ನೇತಾರ ಮತ್ತು ಪರಿಸರವಾದಿ ಸುಂದರಲಾಲ್‌ ಬಹುಗುಣ ಅಭಿಪ್ರಾಯಪಟ್ಟದ್ದಾರೆ.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಶುದ್ಧ ನೀರು, ಶುದ್ಧ ಗಾಳಿಗಾಗಿ ಹೋರಾಟಗಳು ತೀವ್ರಗೊಳ್ಳ ಬೇಕು. ಮೂರನೇ ಮಹಾಯುದ್ಧ ನೀರಿಗಾಗಿಯೇ ನಡೆಯುವ ಸಾಧ್ಯತೆಗಳಿವೆ ಎಂದರು.

ದಾಂಡೇಲಿಯಲ್ಲಿ ಕಾಗದ ಕಾರ್ಖಾನೆಯ ತ್ಯಾಜ್ಯ ವಸ್ತುಗಳು ಕಾಳಿ ನದಿಯನ್ನು ಸೇರುತ್ತಿರುವುದರಿಂದ , ನದಿ ನೀರು ವಿಷವಾಗುತ್ತಿದೆ. ಅನೇಕ ಜಲಚರಗಳು, ಲಕ್ಷಾಂತರ ಜನರು ಬಲಿಯಾಗುವ ಮೊದಲು ಸರಕಾರ ಕೈಗಾರಿಕೆಯನ್ನು ಮುಚ್ಚಿಸಬೇಕು. ಶರಾವತಿ ದಡದಲ್ಲಿ ನೈಸರ್ಗಿಕ ಅರಣ್ಯ ದಿನೇದಿನೇ ನಾಶವಾಗುತ್ತಿದೆ. ಆ ಪರಿಣಾಮ ನದಿಯೂ ಹಾಳಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಮನಹರಿಸದಿದ್ದರೆ ದೊಡ್ಡ ಅಪಾಯ ನಮ್ಮ ಮುಂದಿದೆ ಎಂದು ಸುಂದರಲಾಲ್‌ ಬಹುಗುಣ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X