ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರ ಮಟ್ಟ ಹಾಕಲು ಎಸ್‌ಟಿಎಫ್‌ ಜಾಲ ವಿಸ್ತರಿಸಿ-ಬಿಜೆಪಿ

By Staff
|
Google Oneindia Kannada News

ನಕ್ಸಲರ ಮಟ್ಟ ಹಾಕಲು ಎಸ್‌ಟಿಎಫ್‌ ಜಾಲ ವಿಸ್ತರಿಸಿ-ಬಿಜೆಪಿ
ಕುಡಿಯುವ ನೀರಿನ ದರ ಹೆಚ್ಚಳದಿಂದ ಬಡವರ ಸಂಕಷ್ಟ ಹೆಚ್ಚುತ್ತದೆ -ರಾಮಚಂದ್ರಗೌಡ

ಬೆಂಗಳೂರು : ನಕ್ಸಲ್‌ಚಟುವಟಿಕೆಗಳನ್ನು ನಿಯಂತ್ರಿಸಿ ಶಾಂತಿ ಕಾಯುವ ನಿಟ್ಟಿನಲ್ಲಿ, ರಾಜ್ಯ ಸರಕಾರ ಎಸ್‌ಟಿಎಫ್‌ ಜಾಲವನ್ನು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ವಿಸ್ತರಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಗುರುವಾರ(ಫೆ.10)ಮಾತನಾಡಿದ ಅವರು, ನಕ್ಸಲರ ಬಗ್ಗೆ ಸರಕಾರ ತನ್ನ ಧೋರಣೆ ಬದಲಿಸಿರುವುದನ್ನು ಗೇಲಿ ಮಾಡಿದರು.

ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ನಕ್ಸಲರೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದ ಧರ್ಮಸಿಂಗ್‌, ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ಎಸ್‌ಟಿಎಫ್‌ಗೆ ಆಧುನಿಕ ಆಸ್ತ್ರಗಳ ನೀಡಿ, ನಕ್ಸಲೀಯರ ಪೀಡನೆಗೆ ಕಡಿವಾಣ ಹಾಕಬೇಕು. ಕೂಡಲೇ ಸರ್ವಪಕ್ಷಗಳ ಸಭೆ ಕರೆದು, ಸರಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು.

ನೀರಿನ ದರ ಹೆಚ್ಚಳ : ಬಿಜೆಪಿ ಪಕ್ಷದ ಹಿರಿಯ ನಾಯಕ ರಾಮಚಂದ್ರಗೌಡ ಮಾತನಾಡಿ, ಕುಡಿಯುವ ನೀರು ಪೂರೈಕೆಯ ಶುಲ್ಕವನ್ನು ಹೆಚ್ಚಿಸಿರುವುದು ಸಲ್ಲದು. ಇದರಿಂದ ಬಡವರು ಸಂಕಷ್ಟಕ್ಕೆ ಸಿಲುಕುವರು. ಕೂಡಲೇ ತನ್ನ ಆದೇಶವನ್ನು ಹಿಂಪಡೆಯುವಂತೆ ಸರಕಾರವನ್ನು ಒತ್ತಾಯಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X