ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

90ದಿನಗಳ ನಂತರ ಕಂಚಿ ಉಭಯ ಶ್ರೀಗಳ ಸಮ್ಮಿಲನ

By Staff
|
Google Oneindia Kannada News

90ದಿನಗಳ ನಂತರ ಕಂಚಿ ಉಭಯ ಶ್ರೀಗಳ ಸಮ್ಮಿಲನ
ಕಂಚಿಯ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳಿಗೆ ಹೈಕೋರ್ಟ್‌ ಜಾಮೀನು

ಚೆನ್ನೈ: ಕಂಚಿಯ ಹಿರಿಯ ಶ್ರೀಗಳಾದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಮತ್ತು ಕಿರಿಯ ಶ್ರೀಗಳಾದ ವಿಜಯೇಂದ್ರ ಸರಸ್ವತಿ ಸ್ವಾಮೀಜಿ, ಕಾಂಚೀಪುರಂ ನ್ಯಾಯಾಲಯದಲ್ಲಿ ಗುರುವಾರ(ಫೆ.10) ಸಂಧಿಸಿದರು.

ಸತತ 90 ದಿನಗಳ ಸುದೀರ್ಘ ಅಗಲಿಕೆಯ ನಂತರ ಸಂಧಿಸಿದ ಶ್ರೀಗಳು ಮಾತುಕತೆ ನಡೆಸಿದರು. ಶಂಕರರಾಮನ್‌ ಹತ್ಯೆಗೆ ಸಂಬಂಧಿಸಿದಂತೆ ಕಂಚಿಯ ಉಭಯ ಶ್ರೀಗಳು ಸೇರಿದಂತೆ 24ಮಂದಿ ಮೇಲೆ ಪೋಲೀಸರು ಆರೋಪ ಪಟ್ಟಿ ಸಲ್ಲಿಸುವ ಹಿನ್ನೆಲೆಯಲ್ಲಿ ನ್ಯಾಯಾಲಕ್ಕೆ ಶ್ರೀಗಳು ಆಗಮಿಸಿದ್ದರು.

ಜಾಮೀನು: ಶಂಕರ ರಾಮನ್‌ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಪೋಲೀಸ್‌ ಬಂಧನಕ್ಕೆ ಒಳಗಾಗಿದ್ದ ಕಂಚಿ ಮಠದ ಕಿರಿಯ ಶ್ರೀಗಳಾದ ವಿಜಯೇಂದ್ರ ಸರಸ್ವತಿ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಗುರುವಾರ(ಫೆ.10) ಜಾಮೀನು ನೀಡಿದೆ.

ಕಂಚಿಯ ಹಿರಿಯ ಶ್ರೀಗಳ ಬಿಡುಗಡೆ ನಂತರ, ಕಿರಿಯ ಶ್ರೀಗಳನ್ನು ವಿಚಾರಣೆಗಾಗಿ ಜನವರಿ 10ರಂದು ತಮಿಳುನಾಡು ಪೊಲೀಸರು ಬಂಧಿಸಿದ್ದರು. 50ಸಾವಿರ ಮೊತ್ತದ ಬಾಂಡ್‌ ಪತ್ರಪಡೆದು ನ್ಯಾಯಾಲಯ ಜಾಮೀನು ನೀಡಿತು.
(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X