ನೆತ್ತರ ನಂತರ ಸಂಗೀತದ ಹೊಳೆ ; ಚಿಕ್ಕಮಗಳೂರಿನಲ್ಲಿ ‘ಗೀತೋತ್ಸವ’
ನೆತ್ತರ
ನಂತರ
ಸಂಗೀತದ
ಹೊಳೆ
;
ಚಿಕ್ಕಮಗಳೂರಿನಲ್ಲಿ
‘ಗೀತೋತ್ಸವ’
ಎಚ್.ಆರ್.
ಲೀಲಾವತಿ
ಅಧ್ಯಕ್ಷತೆಯಲ್ಲಿ
ಎರಡು
ದಿನದ
ಸಮ್ಮೇಳನ
ಕರ್ನಾಟಕ ಸುಗಮ ಸಂಗೀತ ಪರಿಷತ್ ಮೂರನೇ ಸಮ್ಮೇಳನ ಗೀತೋತ್ಸವ-2005 ಫೆಬ್ರವರಿ 12 ಹಾಗೂ 13ರಂದು ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದ್ದಾರೆ.
ಮಾಜಿ ಸಚಿವ ಎಚ್.ಜಿ ಗೋವಿಂದೇಗೌಡ ಸಮ್ಮೇಳನವನ್ನು ಉದ್ಘಾಟಿಸುವರು. ಜನಪ್ರಿಯ ಸುಗಮ ಸಂಗೀತ ಗಾಯಕಿ ಎಚ್.ಆರ್. ಲೀಲಾವತಿ ಸಮ್ಮೇಳನದ ಅಧ್ಯಕ್ಷತೆ ವಹಿಸವರು. ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ, ವಿಧಾನ ಪರಿಷತ್ನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಮತ್ತಿತರರು ಸಮ್ಮೇಳನದಲ್ಲಿ ಭಾಗವಹಿಸುವರು.
ಯಥಾಪ್ರಕಾರ ಸಿ. ಅಶ್ವಥ್, ಯಶವಂತ ಹಳಿಬಂಡಿ ಮುಂತಾದ ಹಿರಿಯರೊಂದಿಗೆ ಕಿರಿಯರೂ ಸಮ್ಮೇಳನದಲ್ಲಿ ಹಾಡಲಿದ್ದಾರೆ. ಜಿಲ್ಲೆಯ ಆಯ್ದ 120 ಯುವ ಗಾಯಕರು ಸಮ್ಮೇಳನದಲ್ಲಿ ಹಾಡಿನ ಹೊಳೆ ಹರಿಸುವರು.
ವಾರ್ತಾ ಸಚಿವ ಬಿ. ಶಿವರಾಂ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು , ಕಸಾಪ ಅಧ್ಯಕ್ಷ ಚಂಪಾ, ಸಂಗೀತ ವಿದುಷಿ ಶ್ಯಾಮಲಾ ಭಾವೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು