ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈವ್‌ಬ್ಯಾಂಡ್‌ ಬಂದ್‌ ಮಾಡಿ ‘ಧರ್ಮ’ ಪಾಲಿಸಿ ; ಪಕ್ಷಾತೀತ ಆಗ್ರಹ

By Staff
|
Google Oneindia Kannada News

ಲೈವ್‌ಬ್ಯಾಂಡ್‌ ಬಂದ್‌ ಮಾಡಿ ‘ಧರ್ಮ’ ಪಾಲಿಸಿ ; ಪಕ್ಷಾತೀತ ಆಗ್ರಹ
ನಾಯಿಕೊಡೆಗಳಂತೆ ಲೈವ್‌ಬ್ಯಾಂಡ್‌ಗಳು ತಲೆಎತ್ತಿವೆ,ಯುವಜನರು ದಾರಿತಪ್ಪುತ್ತಿದ್ದಾರೆ

ಬೆಂಗಳೂರು: ಲೈವ್‌ಬ್ಯಾಂಡ್‌ಗಳ ಮೇಲೆ ನಿರ್ಬಂಧ ವಿಧಿಸಿ, ಅದರ ವ್ಯತಿರಿಕ್ತ ಪರಿಣಾಮಗಳಿಗೆ ಕಡಿವಾಣ ಹಾಕಲಾಗುವುದು. ಅಲ್ಲದೇ ಅಬಕಾರಿ ಮತ್ತು ಮನರಂಜನಾ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಭರವಸೆ ನೀಡಿದ್ದಾರೆ.

ವಿಧಾನಮಂಡಲದ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಸುಪ್ರಿಂಕೋರ್ಟ್‌ ಈ ಬಗ್ಗೆ ನೀಡಿರುವ ತೀರ್ಪನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಲೈವ್‌ಬ್ಯಾಂಡ್‌ಗಳ ಹತೋಟಿಗೆ ಸಂಬಂಧಿಸಿದಂತೆ ಪೋಲೀಸ್‌ ಆಯುಕ್ತರು ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.

ಇಡೀ ರಾತ್ರಿ ಲೈವ್‌ಬ್ಯಾಂಡ್‌ಗಳು ನಡೆಯುತ್ತಿವೆ. ಅವು ಭೂಗತ ರೌಡಿಗಳ ತಾಣವಾಗಿರುವುದರ ಜೊತೆಗೆ ಯುವಜನ ರನ್ನು ದಾರಿತಪ್ಪಿಸುತ್ತಿವೆ. ಹೊರರಾಜ್ಯಗಳಿಂದ ಹೆಣ್ಣುಮಕ್ಕಳನ್ನು ಕರೆತಂದು ಇಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಅಲ್ಲಿ ವ್ಯಭಿಚಾರವೂ ನಡೆಯುತ್ತಿದೆ ಎನ್ನುವ ದೂರುಗಳು ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಕೇಳಿಬಂದವು.

ಪೋಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಜೊತೆಗೆ ಕೆಲವು ಅಧಿಕಾರಿಗಳೇ ಲೈವ್‌ ಬ್ಯಾಂಡ್‌ಗಳ ನಡೆಸುತ್ತಿದ್ದಾರೆ. ಈ ಬಗ್ಗೆ ನನ್ನಲ್ಲಿ ಸ್ಪಷ್ಟ ಪುರಾವೆಗಳಿವೆ ಎಂದು ಕಾಂಗ್ರೆಸ್‌ನ ಮರಿತಿಬ್ಬೇಗೌಡ ಹೇಳಿದರು.

ರಾಜಾಜಿನಗರ, ಮಲ್ಲೇಶ್ವರ, ಬಸವೇಶ್ವರ ನಗರದಂತಹ ಪ್ರತಿಷ್ಠಿತ ಬಡಾವಣೆಗಳಿಗೂ ಲೈವ್‌ಬ್ಯಾಂಡ್‌ಗಳು ಕಾಲಿಟ್ಟಿವೆ. ದಿನೇದಿನೇ ನಾಯಿಕೊಡೆಗಳಂತೆ ಅವು ತಲೆಎತ್ತುತ್ತಿವೆ ಎಂದು ಬಿಜೆಪಿಯ ವಿಮಲಾಗೌಡ ಆತಂಕವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X