ಐದು ವರ್ಷಗಳಲ್ಲಿ ಮೆಟ್ರೊ ರೈಲು ಯೋಜನೆ ಪೂರ್ಣ -ಧರ್ಮಸಿಂಗ್
ಐದು
ವರ್ಷಗಳಲ್ಲಿ
ಮೆಟ್ರೊ
ರೈಲು
ಯೋಜನೆ
ಪೂರ್ಣ
-ಧರ್ಮಸಿಂಗ್
ನಕಲಿ
ಸೇಂದಿ
ಸಾಗಿಸುತ್ತಿದ್ದ
255ಮಂದಿ
ಮೇಲೆ
ಪ್ರಕರಣ
ದಾಖಲು
ವಿಧಾನ ಪರಿಷತ್ತಿನಲ್ಲಿ ಎನ್.ಮಂಜುನಾಥ್ ಕೇಳಿದ ಪ್ರಶ್ನೆಗೆ ಗುರುವಾರ(ಫೆ.3) ಉತ್ತರ ನೀಡಿದ ಅವರು, 5605 ಕೋಟಿ ರೂ.ಅಂದಾಜಿನ ಈ ಯೋಜನೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 62.77ಕೋಟಿ ರೂ.ಗಳನ್ನು ತೆಗೆದಿಡುವುದಾಗಿ ಹೇಳಿದರು.
ಯೋಜನೆಯ ರೂಪುರೇಷೆಗಳು, ಭೂಮಿ ವಶ, ಸ್ಥಳಾಂತರ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಮೆಟ್ರೊಯೋಜನೆ ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ಕನ್ನಡ, ಉರ್ದು ಸೇರಿದಂತೆ ವಿವಿಧ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರ ಪಟ್ಟಿ ತಯಾರಿಸಲಾಗಿದ್ದು, ಫೆ.5ರಂದು ಪ್ರಕಟಿಸುವುದಾಗಿ ಧರ್ಮಸಿಂಗ್ ಹೇಳಿದರು.
ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಶಶಿಲ್ ಜಿ.ನಾಮೋಶಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬಾಗಲಕೋಟೆ, ಬೀದರ್, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1990ರಿಂದ ಸೇಂದಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಳ್ಳಭಟ್ಟಿ ಮತ್ತು ಸೆಕೆಂಡ್ಸ್ ಹಾವಳಿ ಕಡಿಮೆಯಾಗಿದೆ. ಆಂಧ್ರಪ್ರದೇಶದಿಂದ ನಕಲಿ ಸೇಂದಿ ಸಾಗಿಸುತ್ತಿದ್ದ 255 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದ ಸಿದ್ದರಾಮಯ್ಯ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ, ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ವ್ಯಾಟ್ ವ್ಯಾಪ್ತಿಗೆ ಸೇರಿಸುವುದಾಗಿ ತಿಳಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ