ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಾಜಿ ಪ್ರಧಾನಿ ಪುತ್ರ ಕುಮಾರಸ್ವಾಮಿಗೆ ಭೂಗತ ಲೋಕದ ನಂಟು’

By Staff
|
Google Oneindia Kannada News

‘ಮಾಜಿ ಪ್ರಧಾನಿ ಪುತ್ರ ಕುಮಾರಸ್ವಾಮಿಗೆ ಭೂಗತ ಲೋಕದ ನಂಟು’
ಸಮಾಜಘಾತುಕ ಶಕ್ತಿಗಳ ಕಪಿಮುಷ್ಠಿಯಲ್ಲಿ ಜೆಡಿಎಸ್‌, ಅಧಿಕಾರಕ್ಕಾಗಿ ಹೊಂದಾಣಿಕೆ

ಬೆಂಗಳೂರು : ಜಾತ್ಯತೀತ ಜನತಾದಳದ ನಾಯಕತ್ವವನ್ನು ಪ್ರಶ್ನಿಸಿ, ಪಕ್ಷದಿಂದ ಅಮಾನತುಗೊಂಡಿರುವ ವೈಜನಾಥ್‌ ಪಾಟೀಲ್‌, ಎ.ಕೆ.ಸುಬ್ಬಯ್ಯ, ಪ್ರೊ.ಲಕ್ಷ್ಮಿಸಾಗರ್‌ ಮತ್ತು ಕೋದಂಡರಾಮಯ್ಯ ಜಂಟಿಯಾಗಿ ಮತ್ತೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಕುಟುಂಬದ ಮೇಲೆ ವಾಗ್ಧಾಳಿಯನ್ನು ಮುಂದುವರೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈ ನಾಯಕರು, ಪಕ್ಷದ ಕಾರ್ಯಾಧ್ಯಕ್ಷ ಕುಮಾರಸ್ವಾಮಿಗೆ ಭೂಗತ ಲೋಕದ ಸಂಪರ್ಕಗಳಿವೆ. ಕುಮಾರಸ್ವಾಮಿ ಆಗಾಗ ದುಬೈಗೆ ತೆರಳಿ, ಅಲ್ಲಿ ಭೂಗತ ದೊರೆ ದಾವೂದ್‌ ಇಬ್ರಾಹಿಂಗೆ ಸೇರಿದ ಹೋಟೆಲ್‌ನಲ್ಲಿ ತಂಗುತ್ತಾರೆ ಎಂದರು.

ಚೋಟಾ ಶಕೀಲ್‌ನ ಆಪ್ತ ಜಮ್ಮೀರ್‌ ಅಹಮದ್‌ ಖಾನ್‌ರನ್ನು ಪಕ್ಷದ ರಾಷ್ಟ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ, ಕುಮಾರಸ್ವಾಮಿ ಅವರ ಜೊತೆಯಲ್ಲಿರುವುದು ಸಂದೇಹವನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಘಾತುಕ ಶಕ್ತಿಗಳ ಕೈಯಲ್ಲಿ ಜೆಡಿಎಸ್‌ ನಲುಗಿದೆ.

ಪಕ್ಷದಲ್ಲಿ ದೇವೇಗೌಡರ ಕುಟುಂಬದ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ನಮ್ಮಿಂದ ವಿವರಣೆ ಕೇಳದೇ, ಏಕಾಏಕಿ ಅಮಾನತುಗೊಳಿಸಿರುವುದು ಇದನ್ನು ಸ್ಪಷ್ಟಪಡಿಸಿದೆ. ಜೆಡಿಎಸ್‌ನ್ನು ಇಂತಹ ದುಷ್ಟ ಶಕ್ತಿಗಳಿಂದ ಬಿಡಿಸಲು ನಮ್ಮ ಹೋರಾಟ ಮುಂದುವರೆಯಲಿದೆ. ಸಿಂಧ್ಯ, ಎಂ.ಪಿ.ಪ್ರಕಾಶ್‌, ಸಿದ್ದರಾಮಯ್ಯ ಅವರಿಗೂ ಗೌಡರ ಧೋರಣೆಗಳ ಬಗ್ಗೆ ಅತೃಪ್ತಿಗಳಿವೆ. ಅಧಿಕಾರ ಮುಗಿದ ನಂತರ ಗೌಡರಿಂದ ದೂರವಾಗುತ್ತಾರೆ ಎಂದು ಈ ಅತೃಪ್ತ ನಾಯಕರು ಅಭಿಪ್ರಾಯಪಟ್ಟರು.

(ಇನ್ಪೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X