ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಎಚ್ಚೆನ್‌’ ಹೆಸರಲ್ಲಿ ಅಧ್ಯಯನ ಕೇಂದ್ರ: ವಿಧಾನ ಮಂಡಲದಲ್ಲಿ ಆಗ್ರಹ

By Staff
|
Google Oneindia Kannada News

‘ಎಚ್ಚೆನ್‌’ ಹೆಸರಲ್ಲಿ ಅಧ್ಯಯನ ಕೇಂದ್ರ: ವಿಧಾನ ಮಂಡಲದಲ್ಲಿ ಆಗ್ರಹ
ನರಸಿಂಹಯ್ಯ ಅವರ ವ್ಯಕ್ತಿತ್ವವನ್ನು ಪ್ರಾಥಮಿಕ ಶಾಲೆಯ ಪಠ್ಯಕ್ಕೆ ಸೇರಿಸಿ -ಶಂಕರಮೂರ್ತಿ

ಬೆಂಗಳೂರು : ವಿಧಾನ ಮಂಡಲದ ಎರಡು ಸದನಗಳು ಗಾಂಧಿವಾದಿ ಎಚ್‌.ನರಸಿಂಹಯ್ಯ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದವು. ನರಸಿಂಹಯ್ಯ ಅವರ ಹೆಸರಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಸರಕಾರವನ್ನು ಈ ಸಂದರ್ಭದಲ್ಲಿ ಸದಸ್ಯರು ಒತ್ತಾಯಿಸಿದರು.

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಮಾತನಾಡಿ, ನರಸಿಂಹಯ್ಯ ಅವರ ವಿಚಾರಗಳು ಅರ್ಥಪೂರ್ಣ. ಅವರು ಶಿಕ್ಷಣರಂಗಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಎಚ್ಚೆನ್‌ ನಿಜವಾದ ಗಾಂಧಿವಾದಿಯಾಗಿದ್ದರು. ಸರಳ ಜೀವನ ನಡೆಸಿದ ಅವರು, ಉನ್ನತ ಚಿಂತನೆಯನ್ನು ಹೊಂದಿದ್ದರು ಎಂದರು.

ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜಕ್ಕೆ ಎಚ್ಚೆನ್‌ ಸಲ್ಲಿಸಿದ ಸೇವೆ ಅನನ್ಯ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಹೆಚ್‌.ಶಂಕರಮೂರ್ತಿ, ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ನರಸಿಂಹಯ್ಯ ಅವರನ್ನು ಕುರಿತಾದ ಪಾಠವೊಂದನ್ನು ಸೇರ್ಪಡೆ ಮಾಡುವಂತೆ ಸಲಹೆ ನೀಡಿದರು. ವಿಧಾನ ಮಂಡಲದಲ್ಲಿ ಎಚ್ಚೆನ್‌ ಬಗ್ಗೆ ಪೈಪೋಟಿಗೆ ಬಿದ್ದವರಂತೆ ಸದಸ್ಯರು ಮೆಚ್ಚುಗೆಯ ಮಹಾಪೂರ ಹರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X