‘ಚಿತ್ರರಂಗ ಕಂಡ ಭೀಷ್ಮ ಜಿ.ವಿ.ಅಯ್ಯರ್’
‘ಚಿತ್ರರಂಗ
ಕಂಡ
ಭೀಷ್ಮ
ಜಿ.ವಿ.ಅಯ್ಯರ್’
ಸಿನಿಮಾ
ಸ್ಟುಡಿಯೋ
ಆಗಿ
ಬದಲಾದ
ಅಯ್ಯರ್
ಆಶ್ರಮ.
ಬೆಂಗಳೂರಿನ ಸುಂದರ ಪ್ರಕಾಶನ ‘ಚಿತ್ರರಂಗ ಕಂಡ ಭೀಷ್ಮ ಜಿ.ವಿ.ಅಯ್ಯರ್’ ಪುಸ್ತಕವನ್ನು ಹೊರತಂದಿದೆ. ಡಾ.ಎಲ್.ಎಸ್.ಶೇಷಗಿರಿ ರಾವ್, ಡಾ.ಚಂದ್ರಶೇಖರ್ ಕಂಬಾರ, ಡಾ.ಮಲ್ಲೇಪುರಂ ಜಿ. ವೆಂಕಟೇಶ್, ಡಾ.ವಿಜಯಾ ಮುಂತಾದ ಮಹತ್ವದ ಲೇಖಕರು ತಮ್ಮ ಮತ್ತು ಜಿ.ವಿ. ಅಯ್ಯರ್ ನಡುವಿನ ಸುಮಧುರ ನೆನಪುಗಳನ್ನು ಈ ಕೃತಿಯಲ್ಲಿ ಅಕ್ಷರಗಳಾಗಿಸಿದ್ದಾರೆ.
‘ಚಿತ್ರರಂಗ ಕಂಡ ಭೀಷ್ಮ ಜಿ.ವಿ.ಅಯ್ಯರ್’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ದೊಡ್ಡಾಲದ ಮರ ಖ್ಯಾತಿಯ ರಾಮೋಹಳ್ಳಿಯ ಬಳಿಯಿರುವ ಭಾರದ್ವಾಜ ಆಶ್ರಮದಲ್ಲಿ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಅಯ್ಯರ್ ಅವರ ಆಸೆಯ ಗೂಡು ಅಯ್ಯರ್ ಸ್ಟುಡಿಯೋವನ್ನು ಪಂಚಭಾಷಾ ತಾರೆ ಸರೋಜಾದೇವಿ ಉದ್ಘಾಟಿಸಲಿದ್ದಾರೆ ಎಂದು ಅಯ್ಯರ್ ಪುತ್ರ ಜಿ.ವಿ.ರಾಘವೇಂದ್ರ ಅಯ್ಯರ್ ತಿಳಿಸಿದ್ದಾರೆ.
ಕಲಾವಿದ ರಮೇಶ್ಚಂದ್ರ ನಿರ್ಮಿಸಿರುವ ಅಯ್ಯರ್ ಕಂಚಿನ ಪುತ್ಥಳಿಯನ್ನು ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಇದೇ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು