ರಕ್ಷಣಾ ವೇದಿಕೆಯಿಂದ ‘ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ’
ರಕ್ಷಣಾ
ವೇದಿಕೆಯಿಂದ
‘ಸ್ವಾಭಿಮಾನಿ
ಕನ್ನಡಿಗರ
ಜಾಗೃತಿ
ಸಮಾವೇಶ’
ಜನವನರಿ
28-29
ಬೆಂಗಳೂರಿನಲ್ಲಿ
ಬೃಹತ್
ಸಮಾವೇಶ,
ಕನ್ನಡ
ಡಿಂಡಿಮ.
ಜನವರಿ 28 ಹಾಗೂ 29 ರಂದು ಕರ್ನಾಟಕ ರಕ್ಷಣಾ ವೇದಿಕೆಯ 4ನೇ ಸ್ವಾಭಿಮಾನಿ ಕನ್ನಡಿಗರ ಜಾಗೃತಿ ಸಮಾವೇಶ ಬೆಂಗಳೂರಿನಲ್ಲಿ ನಡೆಯುತ್ತಿದೆ. ಎಲ್ಲಾ ಪಕ್ಷಗಳ ನಾಯಕರು, ಸಾಹಿತಿಗಳು, ವಿಚಾರವಾದಿಗಳು ಪಕ್ಷ, ಜಾತಿ , ಮತ ಬೆರೆತು ಕನ್ನಡದ ಹೆಸರಿನಲ್ಲಿ ಒಂದು ಸೂರಿನಲ್ಲಿ ಸೇರುತ್ತಿರುವುದು ಈ ಸಮಾವೇಶದ ವಿಶೇಷ.
ಕನ್ನಡಿಗರ ಸ್ವಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ರಕ್ಷಣಾ ವೇದಿಕೆಯ ಸಮಾವೇಶದ ಉದ್ದೇಶ. ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ಕಾರ್ಯಕರ್ತರು ಸೇರುತ್ತಿದ್ದಾರೆ.
ಸಮಾವೇಶದ ಅಂಗವಾಗಿ ಮಹಾತ್ಮಾ ಗಾಂಧಿ ರಸ್ತೆಯ ಕಿಟೆಲ್ ಪ್ರತಿಮೆಯಿಂದ, ಸಮಾವೇಶ ನಡೆಯುವ ಸರ್ಕಾರಿ ಕಲಾ ಕಾಲೇಜು ಆವರಣದ ತನಕ ವೈಭವದ ಕನ್ನಡದ ಸಾಂಸ್ಕೃತಿಕ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಕರ್ನಾಟಕದ ಜಾನಪದ ತಂಡಗಳು, ಸಾಂಸ್ಕೃತಿಕ ತಂಡಗಳು, ಸಾವಿರಾರು ಕಾರ್ಯಕರ್ತರು ಹಾಗೂ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಸಹೃದಯ ಕನ್ನಡಿಗರೆಲ್ಲರೂ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಕ್ಷಣಾ ವೇದಿಕೆ ಕೋರಿದೆ.
ಜಾಗೃತಿ ಸಮಾವೇಶದ ಕರೆಯೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ- http://www.karnatakarakshanavedike.org
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು