ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ 106 ಜೈಲು ಹಕ್ಕಿಗಳ ಬದುಕಿಗೆ ಗಣರಾಜ್ಯೋತ್ಸವದ ಬೆಳಕು

By Staff
|
Google Oneindia Kannada News

ರಾಜ್ಯದ 106 ಜೈಲು ಹಕ್ಕಿಗಳ ಬದುಕಿಗೆ ಗಣರಾಜ್ಯೋತ್ಸವದ ಬೆಳಕು
ಬಂದಿಖಾನೆ ಕೈದಿಗಳ ಸನ್ನಡತೆಗೆ ಸರಕಾರದ ಬಹುಮಾನ, ರಾಜ್ಯಪಾಲರ ಅಂಕಿತ

ಬೆಂಗಳೂರು : ಈ ವರ್ಷದ ಗಣರಾಜ್ಯೋತ್ಸವ ಕರ್ನಾಟಕದಲ್ಲಿ 106ಜೈಲು ಹಕ್ಕಿಗಳಿಗೆ ಸ್ವಾತಂತ್ರ್ಯನೀಡಿದೆ. ಬಂಧನದಿಂದ ಮುಕ್ತರಾಗಿ, ಮನೆಮಂದಿಯಾಂದಿಗೆ ಬದುಕಲು ಅವಕಾಶ ನೀಡಿದೆ.

ವಿವಿಧ ಆರೋಪಗಳ ಹೊತ್ತು ಸೆರೆವಾಸ ಅನುಭವಿಸುತ್ತಿರುವ 106 ಖೈದಿಗಳ ಬಿಡುಗಡೆಗೆ ರಾಜ್ಯ ಸರಕಾರ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯದ ಮನವಿಗೆ ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಅಂಕಿತ ಹಾಕಿದ್ದು, ಜೈಲು ಹಕ್ಕಿಗಳು ಪುಳಕಗೊಂಡಿದ್ದಾರೆ.

ರಾಜ್ಯದ ವಿವಿಧ ಬಂದಿಖಾನೆಗಳಲ್ಲಿನ ಖೈದಿಗಳ ಸನ್ನಡತೆಯನ್ನು ಗುರ್ತಿಸಿ, ಪ್ರತಿವರ್ಷ ಸ್ವಾತಂತ್ರ್ಯದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಮಾಡುವ ಸಂಪ್ರದಾಯ ನಡೆದು ಬಂದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X