ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನ್ನಿಹಿನ್‌ ಸ್ಪರ್ಶದಿಂದ ವ್ಯಕ್ತಿ ಸಾವು: ಹಿಂದು ಜಾಗರಣಾ ವೇದಿಕೆ ದೂರು

By Staff
|
Google Oneindia Kannada News

ಬೆನ್ನಿಹಿನ್‌ ಸ್ಪರ್ಶದಿಂದ ವ್ಯಕ್ತಿ ಸಾವು: ಹಿಂದು ಜಾಗರಣಾ ವೇದಿಕೆ ದೂರು
ಪ್ರಾರ್ಥನಾ ಸಭೆಯಲ್ಲಿನ ದುರಂತಕ್ಕೆ ಕಾರಣರಾವರ ಮೇಲೆ ಕ್ರಮಕ್ಕೆ ಆಗ್ರಹ

ಬೆಂಗಳೂರು : ಪ್ರಾರ್ಥನಾ ಸಭೆಯಲ್ಲಿ ಬೆನ್ನಿ ಹಿನ್‌ರ ಆಶೀರ್ವಾದ ಪಡೆಯಲು ವೇದಿಕೆ ಹತ್ತಿದ ವ್ಯಕ್ತಿಯಾಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಾವಿಗೆ ಬೆನ್ನಿಹಿನ್‌ ಅವರು ಆಕ್ರಮಣಕಾರಿಯಾಗಿ ತಳ್ಳಿದ್ದೇ ಕಾರಣ ಎಂದು ಯಲಹಂಕ ಪೋಲೀಸ್‌ ಠಾಣೆಯಲ್ಲಿ ಹಿಂದು ಜಾಗರಣಾ ವೇದಿಕೆ ದೂರು ಸಲ್ಲಿಸಿದೆ.

ಶನಿವಾರ(ಜ.22) ನಡೆದ ಭಾರತಕ್ಕಾಗಿ ಪ್ರಾರ್ಥಿಸಿ ಕಾರ್ಯಕ್ರಮದಲ್ಲಿ ಅಮೆರಿಕ ಕ್ರೆೃಸ್ತ ಪಾದ್ರಿ ಬೆನ್ನಿ ಸ್ಪರ್ಶದಿಂದ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ವೇದಿಕೆ ಹತ್ತಿದ ಏಳೆಂಟು ಮಂದಿಯನ್ನು ಬೆನ್ನಿ ಹಿನ್‌ ಕೆಳಕ್ಕೆ ತಳ್ಳಿದ. ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಹೊರತು ಪಡಿಸಿ, ಎಲ್ಲರೂ ಎದ್ದು ನಿಂತರು. ಕೂಡಲೇ ಸಂಘಟಕರು ಆ ವ್ಯಕ್ತಿಯನ್ನು ಹೊರಗೆ ಸಾಗಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದುರಂತಕ್ಕೆ ಕಾರಣವಾಗಿರುವ ಬೆನ್ನಿ ಹಿನ್‌ ಹಾಗೂ ಕಾರ್ಯಕ್ರಮದ ಸಂಘಟಕರಾದ ಪಾಲ್‌ತಂಗಯ್ಯ, ಗುಲ್‌ ಕೃಪಲಾನಿ ಮತ್ತಿತರರ ವಿರುದ್ಧ ಕ್ರಮ ಜರುಗಿಸುವಂತೆ ಹಿಂದು ಜಾಗರಣಾ ವೇದಿಕೆ ಆಗ್ರಹಿಸಿದೆ. ಪೋಲೀಸರು ತನಿಖೆ ಮುಂದುವರೆಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X