ಬೆನ್ನಿ ಸಮ್ಮೋಹಿನಿಗೆ ಸರ್ಪಗಾವಲು ; ಭದ್ರತೆಗಾಗಿ 10000 ಪೊಲೀಸರು
ಬೆನ್ನಿ
ಸಮ್ಮೋಹಿನಿಗೆ
ಸರ್ಪಗಾವಲು
;
ಭದ್ರತೆಗಾಗಿ
10000
ಪೊಲೀಸರು
ವಿವಿಧ
ಸಂಘಟನೆಗಳಿಂದ
ಬೆಂಗಳೂರು
ಬಂದ್
ಸಭೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಯುವ ಸಂಪೂರ್ಣ ಹೊಣೆಯನ್ನು ರಾಜ್ಯ ಸರಕಾರ ಹೆಗಲ ಮೇಲೆ ಹಾಕಿಕೊಂಡಿದೆ. ಹೀಗಾಗಿ ಹೈಕೋರ್ಟ್ ಸಭೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹಿಂದು ಜಾಗರಣ ವೇದಿಕೆ, ಆರ್ಎಸ್ಎಸ್, ಶಿವಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇಂದು (ಶುಕ್ರವಾರ) ಬೆಂಗಳೂರು ಬಂದ್ಗೆ ಇಂದು ಕರೆ ನೀಡಿವೆ.
ನಗರದ ಪೋಲೀಸರು, ಮೀಸಲು ಪೋಲೀಸ್ ಪಡೆ, ವಿವಿಧ ಜಿಲ್ಲೆಗಳ ಪೋಲೀಸರು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಮಂದಿ ಬೆನ್ನಿ ಸಭೆಗೆ ಸರ್ಪಗಾವಲಾಗಿ ನಿಂತಿದ್ದಾರೆ.
ತನ್ನದೇ ಆದ ರಕ್ಷಣಾ ಸಿಬ್ಬಂದಿಯ ನಡುವೆ ಏರ್ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ಬೆನ್ನಿ ಹಿನ್ ತಂಗಿದ್ದಾನೆ.
ಶಾಂತಿ ಸುವ್ಯವಸ್ಥೆ ಕಾಯಲು ಪೋಲೀಸರು ಸಜ್ಜಾಗಿದ್ದಾರೆ ಎಂದು ನಗರದ ಪೋಲೀಸ್ ಕಮಿಷನರ್ ಎಸ್.ಮರಿಸ್ವಾಮಿ ತಿಳಿಸಿದ್ದಾರೆ. ಇದೊಂದು ಖಾಸಗಿ ಕಾರ್ಯಕ್ರಮ ಎಂದಿರುವ ಪೋಲೀಸರು, ಹೋಟೆಲ್ನಲ್ಲಿ ಬೆನ್ನಿ ಭೇಟಿಗೆ ಪ್ರಯತ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಅನುಮತಿ ನೀಡಲಿಲ್ಲ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು