ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ; 5 ನೇ ವೇತನ ಆಯೋಗಕ್ಕೆ ಶ್ರೀಕಾರ
ಸರ್ಕಾರಿ
ನೌಕರರಿಗೆ
ಖುಷಿ
ಸುದ್ದಿ
;
5
ನೇ
ವೇತನ
ಆಯೋಗಕ್ಕೆ
ಶ್ರೀಕಾರ
ಭಾಷಣದ
ತುಂಬ
ನಾನಾ
ಕನಸುಗಳು,
40
ಪುಟಗಳ
ಭಾಷಣ
ಓದಿ
ದಣಿದ
ರಾಜ್ಯಪಾಲರು
ಗುರುವಾರ(ಜ.20) ಆರಂಭವಾಗಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅಜೆಂಡಾವನ್ನು ತೆರೆದಿಟ್ಟ ಅವರು, 2005-06ನೇ ಸಾಲಿನಲ್ಲಿ ಪ್ರಮುಖ ಜಿಲ್ಲೆಗಳ ರಸ್ತೆ ಅಭಿವೃದ್ಧಿಯನ್ನು 200ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ರಾಜಧಾನಿ ನಗರ ಬೆಂಗಳೂರು ಅಭಿವೃದ್ಧಿಗೆ ನಾನಾ ಕಾರ್ಯಕ್ರಮಗಳನ್ನು ರಾಜ್ಯಪಾಲರು ಪ್ರಕಟಿಸಿದರು. ನಗರದ ಸೌಂದರ್ಯ ಹೆಚ್ಚಿಸಲು ಹಾಗೂ ಪೌರರಿಗೆ ಅಗತ್ಯ ಸೌಲಭ್ಯಗಳ ಕಲ್ಪಿಸಲು ಸರಕಾರ ಮುಂದಾಗಿದೆ. ಎರಡನೇ ವರ್ತುಲ ರಸ್ತೆ ನಿರ್ಮಾಣಕ್ಕೆ ಸರಕಾರ ಯೋಜನೆ ರೂಪಿಸಿದೆ ಎಂದರು.
ಉತ್ತರ ಕರ್ನಾಟಕದ ಜನರು ಸರಕಾರದ ಮೇಲೆ ಅತೃಪ್ತಿ ಹೊಂದಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಇಲಾಖೆ ರಾಜ್ಯದ 39 ಹಿಂದುಳಿದ ಹಾಗೂ 40 ಅತಿ ಹಿಂದುಳಿದ ತಾಲೂಕುಗಳಲ್ಲಿ ಸೇವಾ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ವಿವಿಧ ಕ್ರಿಯಾಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ.
11ಸಾವಿರ ಹೆಚ್ಚುವರಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಸರಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಸಾರ್ವಜನಿಕ ಕಾರ್ಯ, ನೀರಾವರಿ, ಸಾರಿಗೆ ಮತ್ತಿತರ ಕ್ಷೇತ್ರಗಳಿಗೆ ಸರಕಾರ ಒತ್ತು ನೀಡಿದೆ. ವಿಳಂಭ, ಅನಗತ್ಯ ಖರ್ಚು ವೆಚ್ಚಗಳಿಗೆ ಸರಕಾರ ಕಡಿವಾಣ ಹಾಕಲು ಉದ್ದೇಶಿಸಿದ್ದು ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಾಗಿದೆ ಎಂದು ಟಿ.ಎನ್.ಚತುರ್ವೇದಿ ಹೇಳಿದರು.
ದಣಿದ ರಾಜ್ಯಪಾಲರು : ಉಭಯ ಸದನ ಉದ್ದೇಶಿಸಿ 40ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು. ಭಾಷಣದ ಹದಿನೆಂಟನೇ ಪುಟ ಸಮೀಪಿಸಿದಾಗ ದಣಿದಂತೆ ಕಂಡು ಬಂದ ರಾಜ್ಯಪಾಲರು ಕುರ್ಚಿಯ ಮೇಲೆ ಕುಳಿತರು. ನಂತರ ಭಾಷಣದ ಮುಖ್ಯಾಂಶಗಳನನ್ನು ಮಾತ್ರ ಓದಿ, ಅವಸರದಿಂದ ಕಡೆಯ ಪುಟಕ್ಕೆ ಬಂದು ಭಾಷಣ ಮುಗಿಸಿದರು.
ಕೂಡಲೇ ಅವರನ್ನು ಸ್ಪೀಕರ್ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ರಾಜ್ಯಪಾಲರನ್ನು ಪರೀಕ್ಷಿಸಿದ ಡಾ.ವೀಣಾಗೌಡ, ರಾಜ್ಯಪಾಲರು ಆರೋಗ್ಯವಾಗಿದ್ದಾರೆ. ತಲೆಸುತ್ತುವಿಕೆ ಹಾಗೂ ಭಾವತೀವ್ರತೆಗೆ ಗುರಿಯಾಗಿದ್ದರು ಅಷ್ಟೆ ಎಂದು ಸುದ್ದಿಗಾರರಿಗೆ ತಿಳಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ