ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದ್ಯಾರ್ಥಿಗಳಿಗೆ ಕಥೆ-ಲೇಖನ ಸ್ಪರ್ಧೆ
ವಿದ್ಯಾರ್ಥಿಗಳಿಗೆ
ಕಥೆ-ಲೇಖನ
ಸ್ಪರ್ಧೆ
ಮೈಸೂರಿನ
ಎನ್.ಐ.ಇ
ವತಿಯಿಂದ
ಕಾಲೇಜು
ವಿದ್ಯಾರ್ಥಿಗಳ
ಪ್ರತಿಭಾನ್ವೇಷಣೆ
ಕನ್ನಡ ಸಣ್ಣ ಕಥಾ ಸ್ಪರ್ಧೆ ಹಾಗೂ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದ್ದು , ಸ್ಪಧೆಯ ನಿಯಮಾವಳಿಗಳು ಕೆಳಗಿನಂತಿವೆ.
ಕನ್ನಡ
ಸಣ್ಣ
ಕಥಾ
ಸ್ಪರ್ಧೆಗೆ
ನಿಯಮಗಳು
:
- ಕಥೆಗಳು ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು.
- ಕಥೆಗಳು ಹಸ್ತ ಪ್ರತಿಯಲ್ಲಿ ಆರು ಪುಟಗಳನ್ನು ಮೀರಬಾರದು.
- ಕಥಾ ಸ್ಪರ್ಧೆಗೆ ಬಹುಮಾನಗಳು ಇಂತಿವೆ: ಪ್ರಥಮ : ರೂ. 1,500/-, ದ್ವಿತೀಯ : ರೂ. 800/- ತೃತೀಯ : ರೂ. 500/- ಮತ್ತು ಸಮಾಧಾನಕರ (ಒಟ್ಟು) ರೂ. 500/-
- ವಿಜ್ಞಾನ ಅಥವಾ ತಂತ್ರಜ್ಞಾನ ಲೇಖನಗಳು ಯಾವುದೇ ವಿಷಯವನ್ನು ಕುರಿತದ್ದಾಗಿರಬಹುದು. ಆದರೆ, ತಜ್ಞೇತರರಿಗೆ ಸಾಮಾನ್ಯವಾಗಿ ತಿಳಿದಿರದ ವಿಷಯವಾಗಿರಬೇಕು. ಅಂದರೆ, ತೀರಾ ಸಾಮಾನ್ಯವಾದ ವಿಷಯಗಳಿಗೆ ಉತ್ತೇಜನ ದೊರಕದು.
- ಲೇಖನದ ಮಟ್ಟವು ಕಾಲೇಜು ವಿಜ್ಞಾನ / ತಂತ್ರಜ್ಞಾನ ವಿದ್ಯಾರ್ಥಿಗಳನ್ನು ತಲುಪುವ ದೃಷ್ಟಿಯದ್ದಾಗಿರಬೇಕು. ಪೂರಕವಾದ ಅಂಕಿ ಅಂಶಗಳು, ಚಿತ್ರಗಳು, ಲೇಖನದ ಬೆಂಬಲಕ್ಕಿರಬೇಕು. ಉಲ್ಲೇಖಗಳ ಮತ್ತು ಪೂರಕ ಗ್ರಂಥಗಳ ಬಗ್ಗೆ ಮಾಹಿತಿ ಇರಬೇಕು.
- ಲೇಖನಗಳು ಸ್ವತಂತ್ರ ಹಾಗೂ ಅಪ್ರಕಟಿತವಾಗಿರಬೇಕು. ಭಾಷಾಂತರವಾಗಿರಬಾರದು. ಆಹ್ವಾನಿಸಲ್ಪಟ್ಟಲ್ಲಿ ಲೇಖಕನು ತನ್ನ ಲೇಖನವನ್ನು ಖುದ್ದಾಗಿ ಮಂಡಿಸಲು ಸಿದ್ಧವಿರಬೇಕು.
- ಲೇಖನಗಳು ಎಂಟು ಪುಟಗಳನ್ನು (ಪೂರಕ ಚಿತ್ರಗಳನ್ನು ಹೊರತುಪಡಿಸಿ) ಮೀರಬಾರದು.
- ಹೊಸ ಪ್ರಯತ್ನಗಳಿಗೆ, ಜನಪ್ರಿಯ ಶೈಲಿಗೆ ಪ್ರಾಧಾನ್ಯತೆ ಇರುವುದು.
- ವಿಜ್ಞಾನ ಲೇಖನ ಸ್ಪರ್ಧೆಯ ಬಹುಮಾನಗಳ ಒಟ್ಟು ಮೊತ್ತ ರೂ. 5000/-. ತೀರ್ಪುಗಾರರ ತೀರ್ಪಿನನ್ವಯ ವಿಜೇತರಿಗೆ ಪ್ರಶಸ್ತಿ ಮೊತ್ತವನ್ನು ಹಂಚಲಾಗುವುದು.
ಯದುಪತಿ
ಪುಟ್ಟಿ,
ಪ್ರಾಧ್ಯಾಪಕರು,
ಸಿವಿಲ್
ಇಂಜಿನಿಯರಿಂಗ್
ವಿಭಾಗ,
ದಿ
ನ್ಯಾಷನಲ್
ಇನ್ಸ್ಟಿಟ್ಯೂಟ್
ಆಫ್
ಇಂಜಿನಿಯರಿಂಗ್,
ಮಾನಂದವಾಡಿ
ರಸ್ತೆ,
ಮೈಸೂರು
-
570
008.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Thursday, January 20, 2005, 23:53 [IST]