ಬೆನ್ನಿ ಭೇಟಿ ನಿಷೇಧಿಸಿ- ಮಠಾಧೀಶರಿಂದ ವಿಧಾನಸೌಧದೆದುರು ಧರಣಿ
ಬೆನ್ನಿ
ಭೇಟಿ
ನಿಷೇಧಿಸಿ-
ಮಠಾಧೀಶರಿಂದ
ವಿಧಾನಸೌಧದೆದುರು
ಧರಣಿ
ಸರ್ಕಾರದ
ನಕಾರ,
ನ್ಯಾಯಾಂಗ
ತನಿಖೆಯಾಗಲಿ,
ಜಕ್ಕೂರು
ಮೈದಾನದಲ್ಲಿ
ವಿಶ್ವ
ಶಾಂತಿ
ಯಜ್ಞಕ್ಕೆ
ಮನವಿ
ಅಮೆರಿಕದ ಕ್ರೆೃಸ್ತಪಾದ್ರಿ ಬೆನ್ನಿ ಹಿನ್ ಕಾರ್ಯಕ್ರಮವನ್ನು ನಿಷೇಧಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಕೊಳದ ಮಠದ ಶಾಂತವೀರ ಸ್ವಾಮೀಜಿ, ಒಕ್ಕಲಿಗರ ಮಹಾ ಸಂಸ್ಥಾನದ ಕುಮಾರ ಚಂದ್ರಶೇಖರ ಸ್ವಾಮೀಜಿ, ವಿಭೂತಿ ಮಠದ ಮಹಂತ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಪುರಿ ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು, ಸಾಧು-ಸಂತರು ಪ್ರತಿಭಟಿಸಿ, ಮನವಿ ಪತ್ರವನ್ನು ಸಲ್ಲಿಸಿದರು.
ಸರಕಾರದ ಪರವಾಗಿ ಮನವಿ ಸ್ವೀಕರಿಸಿದ ಕಂದಾಯ ಸಚಿವ ಎಂ.ಪಿ. ಪ್ರಕಾಶ್, ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳಿಗೂ ಧಾರ್ಮಿಕ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಹೀಗಾಗಿ ಪ್ರಾರ್ಥನಾ ಸಭೆಯನ್ನು ನಿಷೇಧಿಸಲಾಗದು ಎಂದರು.
ಸಮಾಜದಲ್ಲಿನ ಶಾಂತಿ ಕದಡದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ಬದ್ಧವಾಗಿದೆ. ಮತಾಂತರಕ್ಕೆ ಪ್ರೇರಣೆ ನೀಡುವಂತಹ ಚಟುವಟಿಕೆಗಳಿಗೆ ಸರಕಾರ ಅವಕಾಶ ನೀಡುವುದಿಲ್ಲ ಎಂದರು.
ಸ್ವಾಮೀಜಿಗಳು ಜಕ್ಕೂರು ವಿಮಾನ ನಿಲ್ಧಾಣದಲ್ಲಿ ವಿಶ್ವ ಶಾಂತಿ ಯಜ್ಞ ನಡೆಸಲು ಅನುಮತಿ ಕೋರಿದ್ದಾರೆ. ಈ ಬಗ್ಗೆ ಸರಕಾರ ಪರಿಶೀಲಿಸಲಿದೆ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
ನ್ಯಾಯಾಂಗ ತನಿಖೆಯಾಗಲಿ : ಹದಿನೇಳು ಮಠದ ಸ್ವಾಮೀಜಿಗಳು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಕಾರ್ಯಕ್ರಮಕ್ಕೆ ನೆರವು ನೀಡುತ್ತಿರುವ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಕಾರ್ಯಕ್ರಮದ ಮೂಲ ಉದ್ದೇಶದ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರಕಾರ ಆದೇಶಿಸಬೇಕು ಎಂದು ಮಠಾಧೀಶರು ಆಗ್ರಹಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು