ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರ್ಮೇನಿಯಾಕ್ಕೆ ವೇದಾ; ಬೆಂಗಳೂರಲ್ಲಿ ಪ್ರಾಣಿಪ್ರಿಯರ ವಿರೋಧ
ಆರ್ಮೇನಿಯಾಕ್ಕೆ
ವೇದಾ;
ಬೆಂಗಳೂರಲ್ಲಿ
ಪ್ರಾಣಿಪ್ರಿಯರ
ವಿರೋಧ
ಆನೆಯನ್ನು
ಆರ್ಮೇನಿಯಾಕ್ಕೆ
ಕಳುಹಿಸಿಕೊಡುವುದರ
ವಿರುದ್ಧ
ಸಹಿ
ಸಂಗ್ರಹ
ಮಹಾತ್ಮಗಾಂಧಿ ರಸ್ತೆಯ ಸಿಂಫೋನಿ ಚಿತ್ರಮಂದಿರದಲ್ಲಿ ಜನವರಿ 16ರ ಭಾನುವಾರ ಸಭೆ ಸೇರಿದ ಪ್ರಾಣಿಪ್ರಿಯರು, ‘ವೇದಾ’ ಆನೆಯನ್ನು ಆರ್ಮೇನಿಯಾಕ್ಕೆ ಕಳುಹಿಸಿಕೊಡುವುದಕ್ಕೆ ತಮ್ಮ ವಿರೋಧ ಸೂಚಿಸಿ ಸಹಿ ಸಂಗ್ರಹ ನಡೆಸಿದರು. ರಾಜಕೀಯದ ಎದುರು ಪ್ರಾಣಿ ಸಂರಕ್ಷಣೆಯ ವಿಷಯ ಸೋಲುತ್ತಿದೆ ಎಂದು ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದರು.
ಸೌಹಾರ್ದತೆಯ ಸಂಕೇತವಾಗಿ ಆರ್ಮೇನಿಯಾಕ್ಕೆ ಆನೆಯನ್ನು ಕಳುಹಿಸಿಕೊಡುವುದು ತಾತ್ವಿಕವಾಗಿ ಸರಿ. ಆದರೆ ಆರ್ಮೇನಿಯಾದಂಥ ಶೀತ ದೇಶದಲ್ಲಿ ಆನೆಗಳು ಬದುಕುಳಿಯಲು ಅನುಕೂಲವಾದ ಪರಿಸರವಿಲ್ಲ . ಇಂಥ ಪರಿಸರದಲ್ಲಿ ‘ವೇದಾ’ ಬದುಕುಳಿಯುವುದೇ ಅನುಮಾನ ಎಂದು ಪ್ರಾಣಿಪ್ರಿಯರು ಹೇಳಿದ್ದಾರೆ.
ಆರ್ಮೇನಿಯಾ ಪ್ರಯಾಣ, ಪ್ರತಿಭಟನೆ ಯಾವುದರ ಅರಿವೂ ಇಲ್ಲದ ಆರರ ಹರೆಯದ ‘ವೇದಾ’ ಬನ್ನೇರುಘಟ್ಟ ಕಾಡಿನಲ್ಲಿ ತಂಪಾಗಿದ್ದಾಳೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, January 17, 2005, 23:53 [IST]