ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಧ್ರಾರೈಲು ದುರಂತಕ್ಕೆ ಅಗ್ನಿ ಆಕಸ್ಮಿಕ ಕಾರಣ : ಉನ್ನತ ಸಮಿತಿ ವರದಿ
ಗೋಧ್ರಾರೈಲು
ದುರಂತಕ್ಕೆ
ಅಗ್ನಿ
ಆಕಸ್ಮಿಕ
ಕಾರಣ
:
ಉನ್ನತ
ಸಮಿತಿ
ವರದಿ
ಸಾಬರ
ಮತಿ
ಎಕ್ಸ್ಪ್ರೆಸ್
ರೈಲಿನಲ್ಲಿ
59
ಮಂದಿ
ಜೀವಂತವಾಗಿ
ಭಸ್ಮವಾಗಿದ್ದ
ಘಟನೆಗೆ
ಹೊಸ
ವ್ಯಾಖ್ಯಾನ
ಸೋಮವಾರ(ಜ.17) ರೈಲ್ವೆ ಮಂಡಳಿ ಮುಖ್ಯಸ್ಥ ಆರ್.ಕೆ. ಸಿಂಗ್ ಅವರಿಗೆ ಸಮಿತಿ ವರದಿ ಸಲ್ಲಿಸಿತು. 2002ರಲ್ಲಿ ಗುಜರಾತ್ನ ಗೋಧ್ರಾ ಬಳಿ ಸಂಭವಿಸಿದ ರೈಲು ದುರಂತ 59ಮಂದಿಯನ್ನು ಬಲಿತೆಗೆದುಕೊಂಡಿತ್ತು. ಆ ನಂತರ ಕೋಮು ಗಲಭೆ ನಡೆದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಯು.ಸಿ ಬ್ಯಾನರ್ಜಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ರೈಲ್ವೆ ಸಚಿವ ಲಾಲೂಪ್ರಸಾದ್ ಯಾದವ್ ರಚಿಸಿದ್ದರು.
ಸಾಬರ್ಮತಿ ಎಕ್ಸ್ಪ್ರೆಸ್ನ ಎಸ್-6 ಭೋಗಿಗೆ ಆಕಸ್ಮಿಕವಾಗಿ ವಿದ್ಯುತ್ ಬೆಂಕಿ ಬಿದ್ದು, ಅದು ಇಡೀ ರೈಲಿಗೆ ವ್ಯಾಪಿಸಿ ದುರಂತಕ್ಕೆ ದಾರಿ ಮಾಡಿದೆ. ಇದೊಂದು ಅಗ್ನಿ ಆಕಸ್ಮಿಕ ಎಂದು ಸಮಿತಿಯ ವರದಿ ತಿಳಿಸಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Monday, January 17, 2005, 23:53 [IST]