ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕ ಗೋಪುರ ಕೆಡವಿದವರ ಮೇಲೆ ಸರ್ಕಾರದ ಕ್ರಮ -ಎಂ.ಪಿ.ಪ್ರಕಾಶ್‌

By Staff
|
Google Oneindia Kannada News

ಕನಕ ಗೋಪುರ ಕೆಡವಿದವರ ಮೇಲೆ ಸರ್ಕಾರದ ಕ್ರಮ -ಎಂ.ಪಿ.ಪ್ರಕಾಶ್‌
ಉಡುಪಿಯ ಶ್ರೀ ಕೃಷ್ಣ ದೇವಸ್ಥಾನಕ್ಕೆ ಶೀಘ್ರದಲ್ಲಿ ಆಡಳಿತಾಧಿಕಾರಿ ನೇಮಕ

ಬೆಂಗಳೂರು : ಉಡುಪಿಯ ಶ್ರೀ ಕೃಷ್ಣ ದೇವಾಲಯ ಮುಜರಾಯಿ ಇಲಾಖೆಗೆ ಸೇರಿರುವುದರಿಂದ, ಅದನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇವಾಲಯದ ನಿರ್ವಹಣೆಗೆ ಶೀಘ್ರದಲ್ಲಿಯೇ ಆಡಳಿತಾಧಿಕಾರಿಯನ್ನು ಸರಕಾರ ನೇಮಕ ಮಾಡಲಿದೆ ಎಂದು ಕಂದಾಯ ಮತ್ತು ಮುಜರಾಯಿ ಇಲಾಖೆ ಸಚಿವ ಎಂ.ಪಿ. ಪ್ರಕಾಶ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಯಾವುದೇ ಹೊಸ ಬದಲಾವಣೆಗೆ ಸರಕಾರದ ಅನುಮತಿ ಅಗತ್ಯ. ಸರಕಾರಕ್ಕೆ ಮಾಹಿತಿ ನೀಡದೇ, ಕನಕ ಗೋಪುರವನ್ನು ನಾಶ ಮಾಡಲಾಗಿದೆ. ಗೋಪುರ ಕೆಡವಿದವರ ಮೇಲೆ ಸರಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದರು.

ಸರ್ವಪಕ್ಷಗಳ ಸಭೆಯನ್ನು ಸದ್ಯದಲ್ಲಿಯೇ ಕರೆದು, ದತ್ತಪೀಠದ ವಿವಾದಕ್ಕೆ ಪರಿಹಾರ ಕಂಡು ಹಿಡಿದಂತೆ ಈ ವಿವಾದವನ್ನು ಸರಕಾರ ಸೌಹಾರ್ದಯುತವಾಗಿ ಬಗೆಹರಿಸಲಿದೆ. ಮತ್ತೊಂದೆಡೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌.ವಿಶ್ವನಾಥ್‌ ಮತ್ತು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಸೌಹಾರ್ದ ಮಾತುಕತೆಯನ್ನು ನಡೆಸಿದ್ದಾರೆ ಎಂದರು.

ಅನುದಾನ ಹೆಚ್ಚಳ : ಮುಜಾರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ನಿರ್ವಹಣೆಗೆ ಈವರೆಗೆ ವಾರ್ಷಿಕ ಆರು ಸಾವಿರ ರೂ. ಅನುದಾನವನ್ನು ನೀಡಲಾಗುತ್ತಿತ್ತು. ಅದನ್ನು ರಾಜ್ಯ ಸರಕಾರ 20ಸಾವಿರಕ್ಕೆ ಹೆಚ್ಚಿಸಲಿದೆ ಎಂದು ಎಂ.ಪಿ.ಪ್ರಕಾಶ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X