ನಾಗಾರ್ಜುನ ವಿದ್ಯುತ್ಸ್ಥಾವರ ವಿರುದ್ಧ ದ.ಕ.ದಲ್ಲಿ ಜನಾಂದೋಲನ
ನಾಗಾರ್ಜುನ
ವಿದ್ಯುತ್ಸ್ಥಾವರ
ವಿರುದ್ಧ
ದ.ಕ.ದಲ್ಲಿ
ಜನಾಂದೋಲನ
ಶಾಖೋತ್ಪನ್ನ
ಸ್ಥಾವರ
ವಿರೋಧಿ
ಕ್ರಿಯಾ
ಸಮಿತಿ
ರಚನೆಗೆ
ನಿರ್ಧಾರ
ಗುರುವಾಯನಕೆರೆಯಲ್ಲಿ ಇತ್ತೀಚೆಗೆ ನಡೆದ ಟ್ರಸ್ಟ್ ಹಾಗೂ ಒಕ್ಕೂಟದ ಪ್ರತಿನಿಧಿಗಳ ಸಭೆಯಲ್ಲಿ ಜನಾಂದೋಲನ ರೂಪಿಸುವ ಕುರಿತ ನಿರ್ಧಾರ ಕೈಗೊಳ್ಳಲಾಯಿತು ಎಂದು ನಾಗಾರ್ಜುನ ಸೇವನಾ ಟ್ರಸ್ಟ್ನ ಕೆ. ಸೋಮನಾಥ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಧಾರ್ಮಿಕ ನಾಯಕರು ಈ ಆಂದೋಲನದಲ್ಲಿ ಪಾಲ್ಗೊಂಡು ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಸಬೇಕಿದೆ ಎಂದು ಸಭೆ ಅಭಿಪ್ರಾಯಪಟ್ಟಿತು. ಅಲ್ಲದೇ, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ದಕ್ಷಿಣಕನ್ನಡ ಜಿಲ್ಲೆಗೆ ಏಕೆ ಸೂಕ್ತವಲ್ಲ ? ಎನ್ನುವ ವಿಷಯದ ಕುರಿತು ಫೆಬ್ರವರಿ ತಿಂಗಳಲ್ಲಿ ಮಂಗಳೂರಿನಲ್ಲಿ ಕಾರ್ಯಾಗಾರವೊಂದನ್ನು ನಡೆಸಲು ತೀರ್ಮಾನಿಸಲಾಯಿತು ಎಂದು ಸೋಮನಾಥ ನಾಯಕ್ ತಿಳಿಸಿದ್ದಾರೆ.
ಶಾಖೋತ್ಪನ್ನ ಸ್ಥಾವರ ವಿರೋಧಿ ಕ್ರಿಯಾ ಸಮಿತಿಯಾಂದನ್ನು ರಚಿಸುವ ಮೂಲಕ ಜಿಲ್ಲೆಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು