ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬೇಕಾದ್ದು ಬರಕೊಳ್ರಿ, ಮೊದ್ಲಿವ್ರನ್ನ ಹೊರಕ್ಕೆ ಕಳಸ್ರಿ’- ದೇವೇಗೌಡ

By Staff
|
Google Oneindia Kannada News

‘ಬೇಕಾದ್ದು ಬರಕೊಳ್ರಿ, ಮೊದ್ಲಿವ್ರನ್ನ ಹೊರಕ್ಕೆ ಕಳಸ್ರಿ’- ದೇವೇಗೌಡ
ದೇವೇಗೌಡರ ಮಾನಸಿಕ ಸ್ಥಿತಿ ಬಗ್ಗೆ ವೈಜನಾಥ್‌ ಪಾಟೀಲ್‌ಗೆ ಅನುಮಾನ

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಪತ್ರಕರ್ತರ ಮೇಲೆ ಮತ್ತೆ ಸಿಟ್ಟು ಬಂದಿದೆ. ದೇವೇಗೌಡರ ಹಿಂದಿ-ಇಂಗ್ಲಿಷ್‌ ಬಗ್ಗೆ ಗೇಲಿ ಮತ್ತು ಸಮಾರಂಭಗಳಲ್ಲಿ ನಿದ್ರೆ ಮಾಡೋ ಪೋಟೋಗಳನ್ನು ಸುದ್ದಿ ಮಾಡೋದರ ಬಗ್ಗೆ ಅವರು ಹಲವು ಸಲ ಅತೃಪ್ತಿ ಪ್ರದರ್ಶಿಸಿದ್ದರು.

ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಭಾನುವಾರ(ಜ.9)ನಡೆದ ಜೆಡಿಎಸ್‌ ಸಚಿವರ ಸಭೆಯಲ್ಲಿ ಅವರು, ಮಾಧ್ಯಮಗಳ ಮೇಲೆ ಕೆಂಡಕಾರಿದರು.

ಸಂಜೆ 6.30ಕ್ಕೆ ಶುರುವಾಗ ಬೇಕಿದ್ದ ಸಭೆ ದೇವೇಗೌಡರು ತಡವಾಗಿ ಆಗಮಿಸಿದ್ದರಿಂದ ರಾತ್ರಿ 9.30ಕ್ಕೆ ಆರಂಭವಾಯಿತು. ದೇವೇಗೌಡರು ಆಗಮಿಸುತ್ತಿದ್ದಂತೆ ಸುತ್ತುವರಿದ ಪತ್ರಕರ್ತರು, ಸಭೆ ಬಗ್ಗೆ ಪ್ರಶ್ನಿಸಿದರು. ಕೂಡಲೇ ಮುಖ ಕೆಂಪಗೆ ಮಾಡಿಕೊಂಡರು.

‘ಹೋಗ್ರಿ ಬೇಕಾದ್ದೂ ಬರಕೋ ಹೋಗ್ರಿ... ನಿಮ್ಮನ್ನು ನಂಬಿ ನಾವು ಪಕ್ಷ ಕಟ್ಟಕ್ಕಾಗಲ್ಲ. ನನ್ನ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆಯೋದನ್ನು, ಎ.ಕೆ.ಸುಬ್ಬಯ್ಯ ಮತ್ತು ವೈಜನಾಥ್‌ ಪಾಟೀಲ್‌ ದಿನನಿತ್ಯ ಬೈಯುವುದನ್ನೆಲ್ಲ ಸುದ್ದಿ ಮಾಡ್ತಿರ’ ಎಂದು ಪತ್ರಕರ್ತರ ಮೇಲೆ ಗುಡುಗಿ, ಅಲ್ಲಿಂದ ಬಿರುಸಾಗಿ ಸಭೆಯತ್ತ ನಡೆದರು.

ಸಭೆಯಲ್ಲಿ ಛಾಯಾಚಿತ್ರ ತೆಗೆಯುತ್ತಿದ್ದ, ಪತ್ರಿಕಾ ಛಾಯಾಗ್ರಾಹಕರನ್ನು ಮತ್ತು ಟಿ.ವಿ.ಚಾನಲ್‌ ವರದಿಗಾರರನ್ನು ನಿಂದಿಸಿದರು. ‘ಇವರನ್ನೆಲ್ಲ ಯಾಕೆ ಒಳಗೆ ಬಿಟ್ಟುಕೊಳ್ಳುತ್ತೀರಿ. ಕಳಸ್ರಿ ಹೊರಕ್ಕೆ’ ಎಂದು ದೇವೇಗೌಡರು ಸಭೆಯ ಸಂಘಟಕರಿಗೆ ಸೂಚಿಸಿದರು.

ಗೌಡರಿಗೆ ಹುಚ್ಚು : ಯಾರಾದರೂ ದೇವೇಗೌಡರ ಬಳಿ ಹೋದರೆ, ನೀವು ನಮಗೆ ವೋಟ್‌ ಹಾಕಿಲ್ಲ. ಇಲ್ಲಿಂದ ಹೊರಟು ಹೋಗ್ರಿ ಅಂತಾರೆ. ಬಹುಶಃ ಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್‌ ಹಿರಿಯ ಶಾಸಕ ವೈಜನಾಥ್‌ ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಜನವರಿ 9ರಂದು ಮಾತನಾಡಿದ ಅವರು, ಗೌಡರ ಮಾನಸಿಕ ಸ್ಥಿತಿ ಹದಗೆಟ್ಟಿರುವ ಬಗ್ಗೆ ಕೆಲವು ಮಂತ್ರಿಗಳು ನನ್ನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದರು.

ರಾಜ್ಯದಲ್ಲಿ ಮಂಡಳಿ- ನಿಗಮಗಳ ಅಧ್ಯಕ್ಷರ ಶೀಘ್ರ ನೇಮಕಾತಿ ಬಗ್ಗೆ ಹೇಳಲಾಗುತ್ತಿದೆ. ಆವೇಳೆಗೆ ಸರಕಾರವೇ ಇರುವುದಿಲ್ಲ ಎಂದು ವೈಜನಾಥ್‌ ಪಾಟೀಲ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X