ರಾಜ್ಯ ಗ್ರಾಮೀಣಾಭಿವೃದ್ಧಿಗೆ ಕೇಂದ್ರದಿಂದ 465ಕೋಟಿ- ಧರ್ಮಸಿಂಗ್
ರಾಜ್ಯ
ಗ್ರಾಮೀಣಾಭಿವೃದ್ಧಿಗೆ
ಕೇಂದ್ರದಿಂದ
465ಕೋಟಿ-
ಧರ್ಮಸಿಂಗ್
2006
ಮಾರ್ಚ್
ವೇಳೆಗೆ
ಎಲ್ಲ
ಶಾಲೆಗಳಲ್ಲಿ
ಕುಡಿಯುವ
ನೀರು,
ಶೌಚಾಲಯದ
ವ್ಯವಸ್ಥೆ
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಡಾ.ರಘುವಂಶಪ್ರಸಾದ್ ಸಿಂಗ್ ಜೊತೆ ನಗರದಲ್ಲಿ ಮಾತುಕತೆ ನಡೆಸಿದ ನಂತರ ಅವರು, ಸುದ್ದಿಗಾರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರದ 14 ವಿಶೇಷ ಯೋಜನೆಗಳಿಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ರಾಜ್ಯದ 2 ಸಾವಿರ ಕಿ.ಮೀ.ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂ. ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಲಿದೆ ಎಂದರು.
ಕೂಲಿಗಾಗಿ ಕಾಳು ಯೋಜನೆಗೆ ಗುಲ್ಪರ್ಗ, ರಾಯಚೂರು, ಕೋಲಾರ ಜಿಲ್ಲೆಗಳು ಈಗ ಸೇರ್ಪಡೆಗೊಂಡಿವೆ. ಮತ್ತೆ ಹತ್ತು ಜಿಲ್ಲೆಗಳ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ 82 ಬರ ಪೀಡಿತ ತಾಲೂಕುಗಳಿಗೆ 2.40 ಸಾವಿರ ಟನ್ ಆಹಾರ ಧಾನ್ಯವನ್ನು ಕೂಲಿಗಾಗಿ ಕಾಳು ಯೋಜನೆಗಾಗಿ ಬಿಡುಗಡೆಮಾಡಲಾಗಿದೆ ಎಂದರು.
ಕೇಂದ್ರದ ನೆರವು ಬಳಸಿಕೊಂಡು ರಾಜ್ಯ ಸರಕಾರ, 2006 ಮಾರ್ಚ್ ವೇಳೆಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಧರ್ಮಸಿಂಗ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ