ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಗ್ರಾಮೀಣಾಭಿವೃದ್ಧಿಗೆ ಕೇಂದ್ರದಿಂದ 465ಕೋಟಿ- ಧರ್ಮಸಿಂಗ್‌

By Staff
|
Google Oneindia Kannada News

ರಾಜ್ಯ ಗ್ರಾಮೀಣಾಭಿವೃದ್ಧಿಗೆ ಕೇಂದ್ರದಿಂದ 465ಕೋಟಿ- ಧರ್ಮಸಿಂಗ್‌
2006 ಮಾರ್ಚ್‌ ವೇಳೆಗೆ ಎಲ್ಲ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ

ಬೆಂಗಳೂರು: ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ 465 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಲು ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಡಾ.ರಘುವಂಶಪ್ರಸಾದ್‌ ಸಿಂಗ್‌ ಜೊತೆ ನಗರದಲ್ಲಿ ಮಾತುಕತೆ ನಡೆಸಿದ ನಂತರ ಅವರು, ಸುದ್ದಿಗಾರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರದ 14 ವಿಶೇಷ ಯೋಜನೆಗಳಿಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ. ರಾಜ್ಯದ 2 ಸಾವಿರ ಕಿ.ಮೀ.ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 200 ಕೋಟಿ ರೂ. ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಲಿದೆ ಎಂದರು.

ಕೂಲಿಗಾಗಿ ಕಾಳು ಯೋಜನೆಗೆ ಗುಲ್ಪರ್ಗ, ರಾಯಚೂರು, ಕೋಲಾರ ಜಿಲ್ಲೆಗಳು ಈಗ ಸೇರ್ಪಡೆಗೊಂಡಿವೆ. ಮತ್ತೆ ಹತ್ತು ಜಿಲ್ಲೆಗಳ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ 82 ಬರ ಪೀಡಿತ ತಾಲೂಕುಗಳಿಗೆ 2.40 ಸಾವಿರ ಟನ್‌ ಆಹಾರ ಧಾನ್ಯವನ್ನು ಕೂಲಿಗಾಗಿ ಕಾಳು ಯೋಜನೆಗಾಗಿ ಬಿಡುಗಡೆಮಾಡಲಾಗಿದೆ ಎಂದರು.

ಕೇಂದ್ರದ ನೆರವು ಬಳಸಿಕೊಂಡು ರಾಜ್ಯ ಸರಕಾರ, 2006 ಮಾರ್ಚ್‌ ವೇಳೆಗೆ ಎಲ್ಲಾ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಧರ್ಮಸಿಂಗ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X