ಬೆಂಗಳೂರ ಸಿಂಗಾರಕ್ಕೆ ನೆರವು ಕೊಡಿ; ಕೇಂದ್ರಕ್ಕೆ ಮುಖ್ಯಮಂತ್ರಿಮೊರೆ
ಬೆಂಗಳೂರ
ಸಿಂಗಾರಕ್ಕೆ
ನೆರವು
ಕೊಡಿ;
ಕೇಂದ್ರಕ್ಕೆ
ಮುಖ್ಯಮಂತ್ರಿಮೊರೆ
ಮುಂಬಯಿಗೆ
ವಿಶೇಷ
ನೆರವು
ನೀಡಿದಂತೆ,
ನಮಗೂ
ವಿಶೇಷ
ಪ್ಯಾಕೇಜ್
ಬೇಕು
ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರ ಸಣ್ಣ ಗುಂಪಿನೊಂದಿಗೆ ದೆಹಲಿಗೆ ತೆರಳಿರುವ ಅವರು, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲು ಹಾಗೂ ಸೋನಿಯಾ ಮೇಡಂ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಐಟಿ-ಬಿಟಿ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿದೆ. ಮುಂಬೈಗೆ ವಿಶೇಷ ನೆರವು ಘೋಷಿಸಿದಂತೆ, ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಲಾಗಿದೆ. ಈ ಪ್ರಸ್ತಾವನೆಗೆ ಹಣಕಾಸು ಸಚಿವ ಪಿ.ಚಿದಂಬರಂ ಸಮ್ಮತಿಸುವ ಭರವಸೆ ನೀಡಿದ್ದಾರೆ ಎಂದರು.
ಬೆಂಗಳೂರು ಅಭಿವೃದ್ಧಿ ಬಗ್ಗೆ ಪ್ರಧಾನಿ ಮನಮೋಹನ್ಸಿಂಗ್ ಆಸಕ್ತಿ ತೋರಿಸಿದ್ದಾರೆ. ಅಂತರಾಷ್ಟ್ಟ್ರೀಯ ವಿಮಾನ ನಿಲ್ಧಾಣ, ವಿದ್ಯುತ್ ಪೂರೈಕೆ, ಬೆಂಗಳೂರು ಮೂಲಸೌಕರ್ಯ ನಿರ್ಮಾಣ, ಮೆಟ್ರೋರೈಲು, ಹೈನು ಅಭಿವೃದ್ಧಿ ಬಗ್ಗೆ ಅವರೊಂದಿಗೆ ಚರ್ಚಿಸಲಾಗಿದೆ. ಕೇಂದ್ರ ಪೂರ್ಣ ಸಹಕಾರ ನೀಡುವ ಸೂಚನೆಗಳು ಸಿಕ್ಕಿವೆ ಎಂದರು.
ರಾಜಧಾನಿ ನಗರದ ಅಭಿವೃದ್ಧಿ ಬಗೆಗೆ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾರೊಂದಿಗೆ ಮುಖ್ಯಮಂತ್ರಿ ಧರ್ಮಸಿಂಗ್ ಚರ್ಚೆ ನಡೆಸಿದ್ದಾರೆ. ಕೇಂದ್ರದ ಹಸಿರು ನಿಶಾನೆಯಾಂದಿಗೆ ಜ.19ರಂದು ರಾಜ್ಯಕ್ಕೆ ಮರಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ