ಐದು ರೂ.ಗೆ ಪಹಣೆ ಪತ್ರ, ರಾಜ್ಯದಿ 36 ತಾಲೂಕುಗಳ ರಚನೆಗೆ ಯತ್ನ
ಐದು
ರೂ.ಗೆ
ಪಹಣೆ
ಪತ್ರ,
ರಾಜ್ಯದಿ
36
ತಾಲೂಕುಗಳ
ರಚನೆಗೆ
ಯತ್ನ
ಚೆನ್ನಮ್ಮನ
ಕಿತ್ತೂರು
ತಾಲೂಕಾಗಿ
ರೂಪುಗೊಳ್ಳಲಿದೆ....
ಹುಕ್ಕೇರಿಯಲ್ಲಿ ಮಿನಿವಿಧಾನಸೌಧವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಕಿತ್ತೂರು ಹೊಸ ತಾಲೂಕುಗಳಲ್ಲಿ ಒಂದಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡನೆ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ನಂತರ, ಹೊಸ ತಾಲೂಕು ರಚನೆಗೆ ಮುಂದಾಗುವುದಾಗಿ ಹೇಳಿದರು.
ವಿಶಿಷ್ಟ ಭೂಮಿ : ರಾಷ್ಟ್ರದಲ್ಲಿಯೇ ವಿನೂತನವಾದ ಭೂಮಿ ಯೋಜನೆಯನ್ನು ಕರ್ನಾಟಕದಲ್ಲಿ , ರಾಜ್ಯ ಸರಕಾರ ಪ್ರಪ್ರಥಮವಾಗಿ ಜಾರಿಗೆ ತಂದಿದೆ. ಈ ಪರಿಣಾಮ ಜಮೀನಿನ ಪಹಣೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಿವೆ. ರಾಜ್ಯದಲ್ಲಿ ಹೋಬಳಿಗೊಂದರಂತೆ ಭೂಮಿ ಕೇಂದ್ರಗಳನ್ನು ತೆರೆಯುವ ಉದ್ದೇಶವಿದೆ.
2000 ನಿರುದ್ಯೋಗಿ ಯುವಕರಿಗೆ ಕಂಪ್ಯೂಟರ್ ಮೂಲಕ ಪಹಣೆ ಪತ್ರವಿತರಿಸಲು ಲೈಸನ್ಸ್ ನೀಡಲಾಗುವುದು. ಪಹಣೆ ಪತ್ರವನ್ನು 15ರೂ.ನಿಂದ 10ರೂ.ಗೆ ಕಡಿಮೆ ಮಾಡಲಾಗಿತ್ತು. ಪಹಣೆ ಪತ್ರಗಳ ಹಿಂದೆ ಜಾಹೀರಾತು ಪ್ರಕಟಿಸಿ, ಆದಾಯ ಪಡೆಯಲಾಗುವುದು. ಮಾರ್ಚಿ ತಿಂಗಳಿನಿಂದ ಕೇವಲ ಐದು ರೂಪಾಯಿಗೆ ಪಹಣಿ ಪತ್ರ ವಿತರಿಸಲು ಸರಕಾರ ನಿರ್ಧರಿಸಿದೆ ಎಂದು ಎಂ.ಪಿ.ಪ್ರಕಾಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ