ರಾಧಾಕೃಷ್ಣನ್ ಪ್ರಕರಣ-ದಿ ಹೈಕೋರ್ಟ್ನಿಂದ ಕಂಚಿಶ್ರೀಗೆ ಜಾಮೀನು
ರಾಧಾಕೃಷ್ಣನ್
ಪ್ರಕರಣ-ದಿ
ಹೈಕೋರ್ಟ್ನಿಂದ
ಕಂಚಿಶ್ರೀಗೆ
ಜಾಮೀನು
ಜ.6ರಂದು
ಸುಪ್ರಿಂಕೋರ್ಟ್
ಗ್ರೀನ್
ಸಿಗ್ನಲ್
ನೀಡಿದರೆ
ಶ್ರೀ
ಬಂಧಮುಕ್ತ?
ನ್ಯಾಯಮೂರ್ತಿ ಆರ್.ಬಾಲಸುಬ್ರಮಣ್ಯಂ, ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣದ ಆರೋಪದ ಮೇಲೆ ಬಂಧಿತರಾಗಿದ್ದ ಶ್ರೀಗಳಿಗೆ ಜಾಮೀನು ನೀಡಿದರು. 25ಸಾವಿರ ರೂ.ಗಳ ವೈಯುಕ್ತಿಕ ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಷ್ಯೂರಿಟಿ ಪಡೆದು ನ್ಯಾಯಾಲಯ ಶ್ರೀಗಳಿಗೆ ಜಾಮೀನು ನೀಡಿದೆ.
ಶಂಕರರಾಮನ್ ಕೊಲೆ ಪ್ರಕರಣ ಹಾಗೂ ರಾಧಾಕೃಷ್ಣನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಶ್ರೀಗಳನ್ನು ತಮಿಳುನಾಡು ಪೋಲೀಸರು ಬಂಧಿಸಿದ್ದರು. ಶಂಕರರಾಮನ್ ಕೊಲೆ ಪ್ರಕರಣಕ್ಕೆ ಜಾಮೀನು ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಕಾರಣ, ಶ್ರೀಗಳು ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿ ಸಲ್ಲಿಸಿದ್ದಾರೆ.
ಇನ್ನೊಂದು ಕೇಸಿದೆ : ರಾಧಾಕೃಷ್ಣನ್ ಪ್ರಕರಣದಲ್ಲಿ ಮದ್ರಾಸ್ ನ್ಯಾಯಾಲಯ ಈಗ ಜಾಮೀನು ನೀಡಿದೆ. ಜನವರಿ 6ರಂದು ನವದೆಹಲಿಯಲ್ಲಿ ಸುಪ್ರಿಂಕೋರ್ಟ್, ಶಂಕರರಾಮನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳು ಕೋರಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಸುಪ್ರಿಂಕೋರ್ಟ್ ಆ ಪ್ರಕರಣಕ್ಕೆ ಜಾಮೀನು ನೀಡಿದರೆ, ಶಂಕರಾಚಾರ್ಯರ ಜೈಲಿನ ವನವಾಸಕ್ಕೆ ಸದ್ಯಕ್ಕೆ ತೆರೆ ಬೀಳಲಿದೆ. ನ.11ರಂದು ಶ್ರೀಗಳನ್ನು ಬಂಧಿಸಲಾಗಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು