ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಧಾಕೃಷ್ಣನ್‌ ಪ್ರಕರಣ-ದಿ ಹೈಕೋರ್ಟ್‌ನಿಂದ ಕಂಚಿಶ್ರೀಗೆ ಜಾಮೀನು

By Staff
|
Google Oneindia Kannada News

ರಾಧಾಕೃಷ್ಣನ್‌ ಪ್ರಕರಣ-ದಿ ಹೈಕೋರ್ಟ್‌ನಿಂದ ಕಂಚಿಶ್ರೀಗೆ ಜಾಮೀನು
ಜ.6ರಂದು ಸುಪ್ರಿಂಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದರೆ ಶ್ರೀ ಬಂಧಮುಕ್ತ?

ಚೆನ್ನೈ : ರಾಧಾಕೃಷ್ಣನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರಿಗೆ ಮದ್ರಾಸ್‌ ನ್ಯಾಯಾಲಯ ಸೋಮವಾರ(ಜ.3) ಜಾಮೀನು ನೀಡಿದೆ.

ನ್ಯಾಯಮೂರ್ತಿ ಆರ್‌.ಬಾಲಸುಬ್ರಮಣ್ಯಂ, ರಾಧಾಕೃಷ್ಣನ್‌ ಮೇಲಿನ ಹಲ್ಲೆ ಪ್ರಕರಣದ ಆರೋಪದ ಮೇಲೆ ಬಂಧಿತರಾಗಿದ್ದ ಶ್ರೀಗಳಿಗೆ ಜಾಮೀನು ನೀಡಿದರು. 25ಸಾವಿರ ರೂ.ಗಳ ವೈಯುಕ್ತಿಕ ಬಾಂಡ್‌ ಮತ್ತು ಇಬ್ಬರು ವ್ಯಕ್ತಿಗಳ ಷ್ಯೂರಿಟಿ ಪಡೆದು ನ್ಯಾಯಾಲಯ ಶ್ರೀಗಳಿಗೆ ಜಾಮೀನು ನೀಡಿದೆ.

ಶಂಕರರಾಮನ್‌ ಕೊಲೆ ಪ್ರಕರಣ ಹಾಗೂ ರಾಧಾಕೃಷ್ಣನ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಶ್ರೀಗಳನ್ನು ತಮಿಳುನಾಡು ಪೋಲೀಸರು ಬಂಧಿಸಿದ್ದರು. ಶಂಕರರಾಮನ್‌ ಕೊಲೆ ಪ್ರಕರಣಕ್ಕೆ ಜಾಮೀನು ನೀಡಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿದ ಕಾರಣ, ಶ್ರೀಗಳು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿ ಸಲ್ಲಿಸಿದ್ದಾರೆ.

ಇನ್ನೊಂದು ಕೇಸಿದೆ : ರಾಧಾಕೃಷ್ಣನ್‌ ಪ್ರಕರಣದಲ್ಲಿ ಮದ್ರಾಸ್‌ ನ್ಯಾಯಾಲಯ ಈಗ ಜಾಮೀನು ನೀಡಿದೆ. ಜನವರಿ 6ರಂದು ನವದೆಹಲಿಯಲ್ಲಿ ಸುಪ್ರಿಂಕೋರ್ಟ್‌, ಶಂಕರರಾಮನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳು ಕೋರಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಸುಪ್ರಿಂಕೋರ್ಟ್‌ ಆ ಪ್ರಕರಣಕ್ಕೆ ಜಾಮೀನು ನೀಡಿದರೆ, ಶಂಕರಾಚಾರ್ಯರ ಜೈಲಿನ ವನವಾಸಕ್ಕೆ ಸದ್ಯಕ್ಕೆ ತೆರೆ ಬೀಳಲಿದೆ. ನ.11ರಂದು ಶ್ರೀಗಳನ್ನು ಬಂಧಿಸಲಾಗಿತ್ತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X