ಸುಂಕದ ಮಂದಿಯಿಂದ ಐಶ್ವರ್ಯಾ, ಸಚಿನ್ ಸುಖದುಕ್ಕ ವಿಚಾರಣೆ
ಸುಂಕದ
ಮಂದಿಯಿಂದ
ಐಶ್ವರ್ಯಾ,
ಸಚಿನ್
ಸುಖದುಕ್ಕ
ವಿಚಾರಣೆ
ತಾರಾ
ಮಣಿಗಳಿಗೆ
ಕೇಂದ್ರ
ತೆರಿಗೆ
ಇಲಾಖೆಯಿಂದ
ಪತ್ರ
ಯಾರ್ಯಾರ ಹಿಂದೆ ಎಂದುಕೊಂಡಿರಿ ? ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸುರ ಸುಂದರಿ ಐಶ್ವರ್ಯಾ ರೈ , ಹೃತಿಕ್ ರೋಷನ್ ಮಾತ್ರವಲ್ಲದೆ, ಆಸ್ಟ್ರೇಲಿಯಾದಲ್ಲಿ ಫಾರ್ಮ್ ಕಳಕೊಂಡು ಒದ್ದಾಡುತ್ತಿರುವ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೆಸರುಗಳು ಸುಂಕದ ಅಧಿಕಾರಿಗಳ ಕೈಯಲ್ಲಿರುವ ಪಟ್ಟಿಯಲ್ಲಿವೆ.
ಸುಂಕದವನ ಮುಂದೆ ಸುಖದುಕ್ಕ ಹೇಳಿಕೊಂಡು ಏನು ಪ್ರಯೋಜನ ಎನ್ನುವ ಒಂದು ಮಾತಿದೆ. ಹೊಸ ವರ್ಷದ ಸಂದರ್ಭದಲ್ಲಿ ಕೇಂದ್ರ ತೆರಿಗೆ ಇಲಾಖೆ ಈ ತಾರೆಗಳಿಗೆ ಬರೆದಿರುವ ಪತ್ರ ಒಂದು ರೀತಿಯಲ್ಲಿ ಸುಖದುಕ್ಕ ವಿಚಾರಿಸುವ ಮಾದರಿಯಲ್ಲೇ ಇದೆ. ಇಲಾಖೆಯ ಉದ್ದೇಶ ಇಷ್ಟು - ಇವರೆಲ್ಲರನ್ನೂ ಶೇ.8 ಸೇವಾತೆರಿಗೆ ಜಾಲಕ್ಕೆ ತರುವುದು.
ನೀವು ಯಾವ್ಯಾವ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಪ್ರತಿನಿಧಿಸುತ್ತಿದ್ದೀರಿ? ನಿಮಗೂ ಆ ಕಂಪನಿಗಳಿಗೂ ಎಂಥ ಸಂಬಂಧ, ಎಷ್ಟು ನಿಕಟ ಸಂಬಂಧ ? ಇತ್ಯಾದಿ ವಿಷಯಗಳ ಕುರಿತು ವಿವರಣೆ ನೀಡುವಂತೆ ಇಲಾಖೆಯ ಅಧಿಕಾರಿಗಳು ಬರೆದಿರುವ ಪತ್ರದ ಅಡಕ ರೂಪ.
ತಾರೆಗಳ ಸೇಲ್ಸ್ ಪ್ರಮೋಷನ್ ಮತ್ತು ಜಾಹಿರಾತು ವಾಣಿಜ್ಯದ ಬಗ್ಗೆ ತಿಳಿದುಕೊಳ್ಳುವುದು ತೆರಿಗೆ ಅಧಿಕಾರಿಗಳ ಉದ್ದೇಶ. ಸುಖದುಕ್ಕ ತಿಳಿದುಕೊಂಡ ನಂತರ ಏನು ಮಾಡುತ್ತಾರೊ? ಹೊಸ ವರ್ಷ ಎಲ್ಲ ರಿಗೂ ಒಳ್ಳೆಯದಾಗಿಯೇ ಇರಲಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು