ಹೆಬ್ಬಾಳ ಮೇಲುರಸ್ತೆಯ ಮೇಲೆ ಷರೀಫರಿಗೆ ಟಾಂಗುಕೊಟ್ಟ ಕೃಷ್ಣ
ಹೆಬ್ಬಾಳ
ಮೇಲುರಸ್ತೆಯ
ಮೇಲೆ
ಷರೀಫರಿಗೆ
ಟಾಂಗುಕೊಟ್ಟ
ಕೃಷ್ಣ
ಸೋನಿಯಾ
ಅವರನ್ನು
ಪ್ರಧಾನಿ
ಮಾಡುವುದು
ಕಾಂಗ್ರೆಸ್ಸಿಗರ
ಸಂಕಲ್ಪವೆಂದ
ಮುಖ್ಯಮಂತ್ರಿ
ಮುಂದಿನ ಚುನಾವಣೆ ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದ್ದು , ಈ ಚುನಾವಣೆಯಲ್ಲಿ ಸೋನಿಯಾ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ ಎಂದು ಕೃಷ್ಣ ಸ್ಪಷ್ಟಪಡಿಸಿದರು. ಸೋಮವಾರ (ಡಿ.29) ನಡೆದ ಹೆಬ್ಬಾಳ ಮೇಲು ಸೇತುವೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಕೃಷ್ಣ ಮಾತನಾಡುತ್ತಿದ್ದರು.
ಇತರ ಪಕ್ಷಗಳೊಂದಿಗಿನ ಹೊಂದಾಣಿಕೆಯ ಅನುಕೂಲಕ್ಕೋಸ್ಕರ ಸೋನಿಯಾ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಬೇಡ ಎಂದು ಜಾಫರ್ ಷರೀಫ್ ಅವರು ಭಾನುವಾರ ಹೇಳಿದ್ದರು. ಈ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಕೃಷ್ಣ - ಸೋನಿಯಾ ಅವರನ್ನು ಪ್ರಧಾನಿ ಮಾಡಬೇಕೆನ್ನುವುದು ಎಲ್ಲ ಕಾಂಗ್ರೆಸ್ಸಿಗರ ಸಂಕಲ್ಪ ಎಂದರು. ಈ ಸಂದರ್ಭದಲ್ಲಿ ಸಂಸದ ಜಾಫರ್ ಷರೀಫ್ ಅವರು ಕೂಡ ಉಪಸ್ಥಿತರಿದ್ದುದು ವಿಶೇಷ.
ಬೆಂಗಳೂರು ಮಾದರಿ ನಗರ : ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಮೇಲುರಸ್ತೆಯನ್ನು ಸೋಮವಾರ ಅನಾವರಣಗೊಳಿಸಿದ ಮುಖ್ಯಮಂತ್ರಿ ಕೃಷ್ಣ , ಇಡೀ ದೇಶದಲ್ಲಿಯೇ ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ರೂಪಿಸುವುದು ತಮ್ಮ ಗುರಿ ಎಂದು ಘೋಷಿಸಿದರು.
5.25 ಕಿಮೀ ಉದ್ದದ ಈ ಮೇಲುಸೇತುವೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 65 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ