ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಟೀವಿಯಲ್ಲಿ ‘ರಸಋಷಿಗೆ ನಮಸ್ಕಾರ’

By Staff
|
Google Oneindia Kannada News

ಈಟೀವಿಯಲ್ಲಿ ‘ರಸಋಷಿಗೆ ನಮಸ್ಕಾರ’
ಕುವೆಂಪು ಜನ್ಮ ಶತಮಾನೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ

ಬೆಂಗಳೂರು : ರಾಷ್ಟ್ರಕವಿ ಕುವೆಂಪು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಈಟೀವಿ ಕನ್ನಡ ವಾಹಿನಿ ‘ರಸಋಷಿಗೆ ನಮಸ್ಕಾರ’ ಎನ್ನುವ ವಿಶೇಷ ಕಾರ್ಯಕ್ರಮ ಸರಣಿಯನ್ನು ರೂಪಿಸಿದೆ.

ಪ್ರತಿ ಭಾನುವಾರ ಬೆಳಗ್ಗೆ 8.30ಕ್ಕೆ ಪ್ರಸಾರವಾಗುವ ‘ರಸಋಷಿಗೆ ನಮಸ್ಕಾರ’ ಕಾರ್ಯಕ್ರಮ ಡಿಸೆಂಬರ್‌ 28ರಿಂದ ಪ್ರಾರಂಭವಾಗುವುದು. ಕುವೆಂಪು ಅವರ ವ್ಯಕ್ತಿತ್ವದ ವಿವಿಧ ಮಜಲುಗಳನ್ನು ಈ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ. ಕಾವ್ಯ, ಕುಟುಂಬ, ಶೈಕ್ಷಣಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ನೆಲೆಗಳಲ್ಲಿ ಕುವೆಂಪು ಅವರನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಇದಾಗಿದೆ.

ಕುವೆಂಪು ಅವರೊಂದಿಗೆ ಒಡನಾಡ ಹೊಂದಿದ್ದ ಹಿರಿಯರೊಂದಿಗೆ ಸಂವಾದವನ್ನು ‘ರಸಋಷಿಗೆ ನಮಸ್ಕಾರ’ ಕಾರ್ಯಕ್ರಮ ಒಳಗೊಂಡಿದೆ. ಡಿ,28ರ ಮೊದಲ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಗಿರೀಶ್‌ ಕಾರ್ನಾಡ್‌ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಖ್ಯಾತ ಕಥೆಗಾರ ಜಯಂತ ಕಾಯ್ಕಿಣಿ ‘ರಸಋಷಿಗೆ ನಮಸ್ಕಾರ’ ಕಾರ್ಯಕ್ರಮವನ್ನು ನಡೆಸಿಕೊಡುವರು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮಲೆನಾಡಿನ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X