ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಸ್ರಬುಧೆ ಮೂಲಕ ಕನ್ನಡಕ್ಕೆ ಬಂದ ‘ಬುದ್ಧಿಜೀವಿ’ ಗಾಂಧಿ ತಾತ

By Staff
|
Google Oneindia Kannada News

ಸಹಸ್ರಬುಧೆ ಮೂಲಕ ಕನ್ನಡಕ್ಕೆ ಬಂದ ‘ಬುದ್ಧಿಜೀವಿ’ ಗಾಂಧಿ ತಾತ
ಸದ್ದಾಮನ ಕೆಲಸವನ್ನು ಭಾರತದಲ್ಲಿ ಮುಂದುವರಿಸುತ್ತಿರುವ ಹಿಂದುತ್ವವಾದಿಗಳು -ಅನಂತಮೂರ್ತಿ ವಿಷಾದ

ಬೆಂಗಳೂರು : ಜೀವ ವೀರೋಧಿಯಲ್ಲದ ಹಾಗೂ ಏಕ ಚಕ್ರಾಧಿಪತ್ಯವನ್ನು ನಾಶಗೊಳಿಸುವ ಪರ್ಯಾಯ ತಂತ್ರಜ್ಞಾನವನ್ನು ಅಭಿವೃದ್ಧಿಪಸುವತ್ತ ವಿಜ್ಞಾನ ಗಮನ ಹರಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮಹಾತ್ಮ ಗಾಂಧಿ ಅವರ ಪ್ರೇರಣೆಯಾಂದಿಗೆ ಆಧುನಿಕ ಚಿಂತನೆಗಳು ಮಿಳಿತಗೊಂಡು ಪರ್ಯಾಯ ತಂತ್ರಜ್ಞಾನ ಸೃಷ್ಟಿಯಾಗಬೇಕು ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು. ಸುನೀಲ್‌ ಸಹಸ್ರಬುಧೆ ಅವರ ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು ಎನ್ನುವ ಕೃತಿಯ ಕನ್ನಡ ಅನುವಾದವನ್ನು ಬಿಡುಗಡೆ ಮಾಡಿ (ಮಂಗಳವಾರ, ಡಿ.23) ಅನಂತಮೂರ್ತಿ ಮಾತನಾಡುತ್ತಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರ ಈ ಕಾರ್ಯಕ್ರಮ ಏರ್ಪಡಿಸಿತ್ತು .

ಭಯ ಹುಟ್ಟಿಸುವ ಮೂಲಕ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎನ್ನುವ ನಡವಳಿಕೆಯಿಂದ ಸದ್ದಾಂ ಹುಸೇನ್‌ ಕ್ರೂರಿಯಾದ. ಭಾರತದಲ್ಲಿ ಹಿಂದುತ್ವವಾದಿಗಳು ಸದ್ದಾಮನ ಕೆಲಸವನ್ನೇ ಮಾಡುತ್ತಿದ್ದಾರೆ ಎಂದು ಅನಂತಮೂರ್ತಿ ವಿಷಾದದಿಂದ ನುಡಿದರು. ಟಾಲ್‌ಸ್ಟಾಯ್‌ ರಷ್ಯಾದಲ್ಲಿ ಸಾಧಿಸಲು ಆಗದೆ ಹೋದುದನ್ನು ಗಾಂಧೀಜಿ ಭಾರತದಲ್ಲಿ ಸಾಧಿಸಿ ತೋರಿದರು. ಗಾಂಧೀಜಿಯ ಬುದ್ಧಿಜೀವಿ ಮುಖವನ್ನು ಸಹಸ್ರಬುಧೆ ತಮ್ಮ ಕೃತಿಯಲ್ಲಿ ಚಿತ್ರಿಸಿದ್ದಾರೆ ಎಂದು ಅನಂತಮೂರ್ತಿ ಹೇಳದರು.

ಶಾಸಕ ಎಂ.ಪಿ.ಪ್ರಕಾಶ್‌ ಪುಸ್ತಕದ ಕುರಿತು ಮಾತನಾಡಿದರು. ಸಚಿವ ಕೆ.ಎಚ್‌.ರಂಗನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X