ಸಿನಿ ಶೈಲಿಯಲ್ಲಿ ನಟ-ಸಂಸದ ಶಶಿಕುಮಾರ್ ಸಂ.ದಳಕ್ಕೆ ವಿದಾಯ
ಸಿನಿ
ಶೈಲಿಯಲ್ಲಿ
ನಟ-ಸಂಸದ
ಶಶಿಕುಮಾರ್
ಸಂ.ದಳಕ್ಕೆ
ವಿದಾಯ
ಕಾಂಗ್ರೆಸ್
ಸೇರಲು
ಶಶಿಕುಮಾರ್
ಸಿದ್ಧತೆ
ಸಂಯುಕ್ತ ಜನತಾದಳದ ಸಂಸದರಾದ ಶಶಿಕುಮಾರ್ ಹಾಗೂ ಡಿ.ಪಿ.ಯಾದವ್ ಅವರು ತಮ್ಮಿಬ್ಬರಿಗೆ ಲೋಕಸಭೆಯಲ್ಲಿ ಪ್ರತ್ಯೇಕ ಆಸನ ಕಲ್ಪಿಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದು, ಈ ಮನವಿಯನ್ನು ಸಭಾಧ್ಯಕ್ಷರು ಪುರಸ್ಕರಿಸಿದ್ದಾರೆ. ಸಂಯುಕ್ತ ದಳದಿಂದ ಹೊರಬರುವ ವಿಷಯವನ್ನು ಸ್ವತಃ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಯುಕ್ತ ಜನತಾದಳದ ರಾಷ್ಟ್ರಾಧ್ಯಕ್ಷರಾದ ಶರದ್ ಯಾದವ್ ಅವರು ತಮ್ಮೊಂದಿಗೆ ಯಾವುದೇ ವಿಷಯದ ಕುರಿತು ಚರ್ಚಿಸುತ್ತಿಲ್ಲ . ಕರ್ನಾಟಕದಲ್ಲಿ ಪಕ್ಷದ ಸಂಘಟನೆಯ ಕುರಿತೂ ಶರದ್ ಯಾದವ್ ಆಸಕ್ತಿ ವಹಿಸುತ್ತಿಲ್ಲ . ಆ ಕಾರಣದಿಂದ ಸಂಯುಕ್ತ ದಳವನ್ನು ತ್ಯಜಿಸುವ ಕುರಿತು ತೀರ್ಮಾನ ಕೈಗೊಂಡಿರುವೆ. ಜನತೆಯ ಜೊತೆ ಚರ್ಚಿಸಿದ ನಂತರ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ ಶಶಿಕುಮಾರ್ ಹೇಳಿದ್ದಾರೆ.
ಶಶಿಕುಮಾರ್ ಕಾಂಗ್ರೆಸ್ಗೆ ?
ಸಂಯುಕ್ತ ಜನತಾದಳದಿಂದ ಹೊರಬಂದಿರುವ ಸಂಸದ ಶಶಿಕುಮಾರ್, ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಈ ಭೇಟಿಯಿಂದಾಗಿ ಶಶಿಕುಮಾರ್ ಕಾಂಗ್ರೆಸ್ ಸೇರುವ ಸಾಧ್ಯತೆಗಳು ನಿಚ್ಚಳವಾಗಿವೆ. ಚಿತ್ರದುರ್ಗದಿಂದ ಮರು ಆಯ್ಕೆ ಬಯಸಿರುವ ಶಶಿಕುಮಾರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್