ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ ಸುಪ್ತದೀಪ್ತಿಯ ದ್ವಿತೀಯ ಕಾವ್ಯದೀಪ್ತಿ ಲೋಕಾರ್ಪಣೆ

By Staff
|
Google Oneindia Kannada News

ಉಡುಪಿಯಲ್ಲಿ ಸುಪ್ತದೀಪ್ತಿಯ ದ್ವಿತೀಯ ಕಾವ್ಯದೀಪ್ತಿ ಲೋಕಾರ್ಪಣೆ
ವಿಜಯ ಕರ್ನಾಟಕದ ವಿಶ್ವೇಶ್ವರ ಭಟ್‌ ‘ಭಾವಗಾನ’ ಅನಾವರಣಗೊಳಿಸುವರು

Jyothi Mahadeva‘‘ ವಿಶ್ವವೊಂದು ಪುಟ್ಟ ನಗರಿ’’- ತಾಂತ್ರಿಕತೆಯ ಕೊಡುಗೆ-
ನಗುವ ಮೇಲೆ ಹೊಡೆದ ನೋವು, ಕೆಡವಿ, ಘೋರ ಬಲೆಗೆ.
ಯಾರ ರಕ್ತದಾಹ ತಣಿಸೆ ಜೀವ ತೆತ್ತರಾರು-
ನೋವನುಂಡು, ನೋವ ಹಂಚಿ, ಯಮರೆ ಆದ ರೂಕ್ಷರು....

- ಇಂಥ ಸಾಲುಗಳನ್ನು ಬರೆಯುವ ಮೂಲಕ ದಟ್ಸ್‌ಕನ್ನಡ ಓದುಗರಿಗೆ ಮೂರು ವರ್ಷಗಳ ಹಿಂದೆ ಪರಿಚಿತರಾದ ಜ್ಯೋತಿ ಮಹಾದೇವ ಉರುಫ್‌ ಸುಪ್ತದೀಪ್ತಿ ವರ್ತಮಾನದ ತವಕ- ತಲ್ಲಣಗಳಿಗೆ ಕಾವ್ಯದನಿಯಾಗುತ್ತಲೇ ಬಂದವರು. ಆ ದನಿಯನ್ನು ಓದುಗರೊಡನೆ ನಿಯಮಿತವಾಗಿ ಹಂಚಿಕೊಂಡು ಬಂದ ಅವರು ಕಳೆದ ವರ್ಷ ನಡೆದ ದಟ್ಸ್‌ಕನ್ನಡ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನಕ್ಕೂ ಭಾಜನರಾಗಿದ್ದರು. ಸದ್ಯಕ್ಕೆ ಮಣಿಪಾಲದಲ್ಲಿ ನೆಲೆನಿಂತಿರುವ ಜ್ಯೋತಿ ಮಹಾದೇವ ಅವರ ಎರಡನೇ ಪುಸ್ತಕ ಪ್ರಸವ ಸನ್ನಿಹಿತವಾಗಿದೆ. ಡಿಸೆಂಬರ್‌ 21, ಭಾನುವಾರ ಅವನ ಎರಡನೇ ಕವನ ಸಂಕಲನ ‘ಭಾವಗಾನ’ದ ಅನಾವರಣ.

ಉಡುಪಿಯ ಕಿದಿಯೂರು ಹೊಟೇಲ್‌ನಲ್ಲಿ ಸಂಜೆ ನಾಲ್ಕು ಗಂಟೆಗೆ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಪುಸ್ತಕ ಅನಾವರಣ ಮಾಡುತ್ತಾರೆ. ಕೃತಿಗೆ ಮುನ್ನುಡಿಯನ್ನೂ ಬರೆದಿರುವ ಡಾ. ಸಾ.ಶಿ.ಮರುಳಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೇಮಾಭಟ್‌, ದಟ್ಸ್‌ಕನ್ನಡ ಡಾಟ್‌ ಕಾಂ ಸಂಪಾದಕ ಎಸ್‌.ಕೆ.ಶಾಮಸುಂದರ್‌ ಹಾಗೂ ಗದಗಿನ ವಿದ್ಯಾನಿಧಿ ಪ್ರಕಾಶನ ಸಂಸ್ಥೆಯ ಜಯದೇವ ಮೆಣಸಗಿ ಆಹ್ವಾನಿತ ಮುಖ್ಯ ಅತಿಥಿಗಳು. ಮನೆ ಮಟ್ಟಿನ ಸಮಾರಂಭದಂತಿರುವ ಕಾರ್ಯಕ್ರಮದಲ್ಲಿ ಚಂದ್ರಶೇಖರ ಕೆದ್ಲಾಯ ಭಾವಗೀತೆಗಳನ್ನು ಕೂಡ ಹಾಡಲಿದ್ದಾರೆ.

(ಇನ್ಫೋ ವಾರ್ತೆ)

ಓದಿ-
ಸುಪ್ತದೀಪ್ತಿ ಕಾವ್ಯದ ಸ್ಯಾಂಪಲ್ಲು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X