ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗೈವಿರುದ್ಧ ಡಿ.26ರಿಂದ ಬಿಜೆಪಿಯ ಇನ್ನೊಂದು ‘ಜನ ಸಂಘರ್ಷ’

By Staff
|
Google Oneindia Kannada News

ಕಾಂಗೈವಿರುದ್ಧ ಡಿ.26ರಿಂದ ಬಿಜೆಪಿಯ ಇನ್ನೊಂದು ‘ಜನ ಸಂಘರ್ಷ’
ನಕಲಿ ಛಾಪಾ ಹಗರಣ ಪ್ರಕರಣದ ಸಿಬಿಐ ತನಿಖೆಗೆ ಬಿಗಿ ಒತ್ತಾಯ

ಬೆಂಗಳೂರು : ಅಧಿಕಾರಾರೂಢ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ರಾಜ್ಯದ 100 ತಾಲ್ಲೂಕುಗಳಲ್ಲಿ ಡಿಸೆಂಬರ್‌ 26ರಿಂದ ಜನ ಸಂಘರ್ಷ ಯಾತ್ರೆ ನಡೆಸಲಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅನಂತಕುಮಾರ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸುವುದು, ರೈತರಿಗೆ ಬೆಳೆ ವಿಮಾ ಹಣವನ್ನು ಬೇಗ ಬಿಡುಗಡೆ ಮಾಡುವಂತೆ ಒತ್ತಾಯಿಸುವುದು ಹಾಗೂ ಆನ್‌ಲೈನ್‌ ಲಾಟರಿ ನಿಷೇಧಕ್ಕೆ ಒತ್ತಡ ತರುವುದು ಬಿಜೆಪಿ ಯಾತ್ರೆಯ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಮೂರು ತಂಡಗಳು ಜನ ಸಂಘರ್ಷ ಯಾತ್ರೆಗೆ ಇಳಿಯಲಿದ್ದು, ಈ ಪೈಕಿ ಒಂದು ತಂಡದ ಮುಖಂಡರಾಗಿ ಅನಂತಕುಮಾರ್‌ ಸಂಚರಿಸಲಿದ್ದಾರೆ.

ಕಾಂಗ್ರೆಸ್‌ನ ದುರಾಡಳಿತ ವಿರೋಧಿಸಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಲ್ಲಿ ಬಿಜೆಪಿ ಇದೇ ವಾರ ಮೂರು ದಿನಗಳ ಅಹರ್ನಿಶಿ ಧರಣಿ ನಡೆಸಿದ ಬೆನ್ನಲ್ಲೇ ಈಗ ಜನ ಸಂಘರ್ಷ ಯಾತ್ರೆಗೆ ಹೊರಟು ನಿಂತಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X