ಹಳೆಬೇರು ಖಾದಿಗೆ ಉಸಿರು-ಬೆಂಗೇರಿಯಲ್ಲಿ ಝಂಡಾ ಕೇಂದ್ರ
ಹಳೆಬೇರು
ಖಾದಿಗೆ
ಉಸಿರು-ಬೆಂಗೇರಿಯಲ್ಲಿ
ಝಂಡಾ
ಕೇಂದ್ರ
ಹೊಸ
ತ್ರಿವರ್ಣ
ಧ್ವಜ
ತಯಾರಿಕಾ
ಕೇಂದ್ರ
ಜನವರಿ,
2004ರಲ್ಲಿ
ತಲೆಯೆತ್ತಲಿದೆ
ಶುಕ್ರವಾರ (ಡಿ. 19) ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮುಂಬಯಿಯ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗ ಧ್ವಜ ಮಾಡುವ ಕೇಂದ್ರ ತೆರೆಯಲು ಈಗಾಗಲೇ ಹಸಿರು ನಿಶಾನೆ ಕೊಟ್ಟಿದೆಯಲ್ಲದೆ 52 ಲಕ್ಷ ರುಪಾಯಿ ಹಫ ಮಂಜೂರು ಮಾಡಿದೆ. ರಾಜ್ಯ ಖಾದಿ ಗ್ರಾಮೋದ್ಯೋಗ ಒಕ್ಕೂಟಕ್ಕೆ ಅದು ಹಣ ನೀಡಿದ್ದು, ಕೇಂದ್ರದ ಕೆಲಸಕ್ಕೆ ತಕ್ಕ ನೆರವು ಒದಗಿಸುವಂತೆ ದಕ್ಷಿಣ ಭಾರತ ಜವಳಿ ಸಂಶೋಧನಾ ಒಕ್ಕೂಟಕ್ಕೆ ಹೇಳಿದೆ ಎಂದು ಸಚಿವರು ಹೇಳಿದರು.
ವಿಧಾನಸಭೆಯಲ್ಲಿ ವರ್ಷದ ಮುನ್ನೂರಾ ಅರವತ್ತೆೈದೂ ದಿನ ರಾಷ್ಟ್ರಧ್ವಜ ಹಾರಿಸುವ ದೇಶದ ಏಕೈಕ ರಾಜ್ಯ ಮಹಾರಾಷ್ಟ್ರ. ಕೇಂದ್ರ ಸಚಿವರ ನೆಲೆಗಳು ಹೆಚ್ಚಾಗಿರುವ ಕಾರಣ ತ್ರಿವರ್ಣ ಧ್ವಜದ ಅತಿ ಹೆಚ್ಚು ಖರೀದಿ ನಡೆಯುವುದು ರಾಜಧಾನಿ ದೆಹಲಿಯಲ್ಲಿ ಎಂದು ಸಚಿವರು ಸಾಮಾನ್ಯ ಜ್ಞಾನದ ವಿಷಯ ಹಂಚಿಕೊಂಡರು.
ಖಾದಿ ಬಗೆಗೆ ಜಾಗೃತಿ ಮೂಡಿಸಲು ಜನವರಿ 20, 2004 ರಂದು ಹುಬ್ಬಳ್ಳಿಯಲ್ಲಿ ಖಾದಿ ಪ್ರದರ್ಶನ ಏರ್ಪಡಿಸುತ್ತೇವೆ. ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರದ ಬಗೆಗೊ ಪ್ರದರ್ಶನದಲ್ಲಿ ಸಾಕಷ್ಟು ಪ್ರಚಾರ ಕೊಡುತ್ತೇವೆ ಎಂದರು.
(ಪಿಟಿಐ)
ಮುಖಪುಟ / ವಾರ್ತೆಗಳು