ರಾಹುಲ್ ಹೊಡೆತದಿಂದ ಬೌಂಡರಿ ದಾಟಿದ ಅಪ್ಪ-ಅಮ್ಮನ ಪ್ರೀತಿ
ರಾಹುಲ್
ಹೊಡೆತದಿಂದ
ಬೌಂಡರಿ
ದಾಟಿದ
ಅಪ್ಪ-ಅಮ್ಮನ
ಪ್ರೀತಿ
‘ಇದು
ಮಗರಾಮನೊಬ್ಬನದ್ದೇ
ಅಲ್ಲ,
ತಂಡದ
ಗೆಲುವು’
ದ್ರಾವಿಡ್ ಡಬ್ಬಲ್ ಸೆಂಚುರಿ ಹೊಡೆದಾಗ ಅಬ್ಬಬ್ಬಾ ಅಂದರೆ ಪಂದ್ಯ ಡ್ರಾ ಆಗಬಹುದು ಅಂದುಕೊಂಡಿದ್ದೆ. ಆದರೆ ಸಿಕ್ಕಿದ ಗೆಲುವು ರಾಹುಲ್ ಇನ್ನಿಂಗ್ಸ್ಗೆ ಹೆಚ್ಚು ಅರ್ಥವನ್ನು ಕೊಟ್ಟಿದೆ. ಬಹಳ ಸಂತೋಷವಾಗಿದೆ. ಏನು ಹೇಳಬೇಕೋ ಮಾತೇ ಹೊರಡುತ್ತಿಲ್ಲ ಎಂದ ಶರದ್ ದ್ರಾವಿಡ್ ಮಾತುಗಳಿಗೆ ಸಂತೋಷದ ತೊದಲಿಕೆಯಿತ್ತು.
ಅಮ್ಮ ಪುಷ್ಪಾ ತಮ್ಮ ಮಗನ ತಾಳ್ಮೆಯನ್ನು ಬಾಯಿತುಂಬಾ ಹೊಗಳಿದರು. ಆತ ಒಳ್ಳೆಯ ಚೆಂಡುಗಳ ರಾಶಿಯಿಂದ ಕೆಟ್ಟದ್ದನ್ನು ಹೇಗೆ ಹೆಕ್ಕಿ ತೆಗೆಯುವ ಚಾಲಾಕಿಯೋ ಜೀವನದ ನಡೆಯ ಆಯ್ಕೆಯಲ್ಲೂ ಅಷ್ಟೇ ಜಾಣ. ದ್ರಾವಿಡ್ ಆಟ ಖುಷಿ ಕೊಟ್ಟಿತು. ಆದರೆ ವಿವಿಎಸ್ ಲಕ್ಷ್ಮಣ್, ಕುಂಬ್ಳೆ ಹಾಗೂ ಅಗರ್ಕರ್ ಕೂಡ ಚೆನ್ನಾಗಿ ಆಡಿದ್ದರಿಂದ ನಮಗೆ ಗೆಲುವು ಸಿಕ್ಕಿತು. ರಾಹುಲ್ ಒಬ್ಬನಿಂದಲೇ ಪಂದ್ಯ ಗೆದ್ದೆವು ಅನ್ನೋದು ಉತ್ಪ್ರೇಕ್ಷೆಯಾಗುತ್ತದೆ. ಇದು ತಂಡದ ಗೆಲುವು. ಅವನು ಇನ್ನಷ್ಟು ಬೆಳೆಯಬೇಕು ಅನ್ನೋದು ನಮ್ಮ ಕನಸು ಅಂತ ಪುಷ್ಪ ಗಂಡನ ಮುಖ ನೋಡಿದರು. ಇಬ್ಬರ ಕಣ್ಣುಗಳೂ ಹೊಳೆದವು.
(ಪಿಟಿಐ)
ವಾರ್ತಾ
ಸಂಚಯ
22
ವರ್ಷಗಳ
ನಂತರ
ಕಾಂಗರೂ
ನೆಲದಲ್ಲಿ
ಭಾರತಕ್ಕೆ
ಟೆಸ್ಟ್
ವಿಜಯ
ಮುಖಪುಟ / ವಾರ್ತೆಗಳು