ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೂರು ಬಳಿ ಅಪಘಾತ ; ಅಂಬರೀಷ್‌ ಅಪಾಯದಿಂದ ಪಾರು

By Staff
|
Google Oneindia Kannada News

ಮದ್ದೂರು ಬಳಿ ಅಪಘಾತ ; ಅಂಬರೀಷ್‌ ಅಪಾಯದಿಂದ ಪಾರು
ಖಾಲಿ ಕಾರಿನ ಮೇಲೆ ಮಗುಚಿ ಬಿದ್ದ ಲಾರಿ

ಬೆಂಗಳೂರು : ಸಂಸದ ಹಾಗೂ ಚಿತ್ರನಟ ಅಂಬರೀಷ್‌ ಮದ್ದೂರು ಸಮೀಪ ಸೋಮವಾರ (ಡಿ.15) ಸಂಭವಿಸಿದ ರಸ್ತೆ ಅಪಘಾತದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಪೆಟ್ರೋಲ್‌ ಬಂಕ್‌ ಒಂದರ ಬಳಿ ಕಾರು ನಿಲ್ಲಿಸಿ, ಪೆಟ್ರೋಲ್‌ ಬಂಕ್‌ನಲ್ಲಿ ಅಂಬರೀಷ್‌ ಕುಳಿತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಲ್ಲಿನ ಲಾರಿಯಾಂದು ಪಲ್ಟಿ ಹೊಡೆದು ಕಾರಿನ ಮೇಲೆ ಬಿದ್ದಿದ್ದು , ಕಾರು ಖಾಲಿಯಾಗಿದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ . ಅಪಘಾತದ ನಂತರ ಅಂಬರೀಷ್‌ ಅವರು ಬೇರೊಂದು ಕಾರಿನಲ್ಲಿ ತಮ್ಮ ಪ್ರಯಾಣ ಮುಂದುವರಿಸಿದರು.

ಅಂಬರೀಷ್‌ ಅವರಿಗೆ ಯಾವುದೇ ಅಪಾಯ ಸಂಭವಿಸದಿರುವ ಕುರಿತು ನೆಮ್ಮದಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕೃಷ್ಣ , ಅಂಬರೀಷ್‌ಗೆ ಧೀರ್ಘಾಯುಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X