ಕೃಪಾಂಕ ನೌಕರರು ಮತ್ತೆ ಅತಂತ್ರ ; ನೇಮಕಾತಿಗೆ ಕೋರ್ಟ್ ತಡೆ
ಕೃಪಾಂಕ
ನೌಕರರು
ಮತ್ತೆ
ಅತಂತ್ರ
;
ನೇಮಕಾತಿಗೆ
ಕೋರ್ಟ್
ತಡೆ
5
ಸಾವಿರ
ನೌಕರರ
ಮರು
ನೇಮಕಾತಿ
ಆದೇಶ
ತಡೆಹಿಡಿದ
ಸುಪ್ರಿಂಕೋರ್ಟ್
ರಾಜ್ಯ ಸರ್ಕಾರದ ಮರು ನೇಮಕಾತಿ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಕೆ.ಎನ್.ಮೋಹನ್, ಕಿರಣ್ ವಿಷ್ಣು ಕಾಂಬ್ಳೆ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಆದೇಶಕ್ಕೆ ತಡೆನೀಡಿತು. ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ಹಾಗೂ ನ್ಯಾಯಮೂರ್ತಿ ರುಮಾಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ (ಡಿ.12) ಈ ಮಹತ್ವದ ಆದೇಶ ನೀಡಿತು.
ಗ್ರಾಮೀಣ ಕೃಪಾಂಕದ ಸರ್ಕಾರಿ ಸೇವೆಗೆ ನಿಯೋಜಿತರಾಗಿದ್ದ ನೌಕರರನ್ನು ಸುಪ್ರಿಂಕೋರ್ಟಿನ ಆದೇಶದ ಅನ್ವಯ ರಾಜ್ಯ ಸರ್ಕಾರ ಸೇವೆಯಿಂದ ತೆರವುಗೊಳಿಸಿತ್ತು . ಆದರೆ, ಮಾನವೀಯ ದೃಷ್ಟಿಯಿಂದ ವಿಶೇಷ ನಿಯಮದ ಅನ್ವಯ 5 ಸಾವಿರ ನೌಕರರನ್ನು ಸರ್ಕಾರ ಹೊಸದಾಗಿ ನೇಮಕ ಮಾಡಿತ್ತು . ಈ ನೇಮಕ ಮೀಸಲು ಹಾಗೂ ರೋಸ್ಟರ್ ಪದ್ಧತಿಗೆ ವಿರುದ್ಧವಾಗಿದೆ ಎನ್ನುವ ಅರ್ಜಿದಾರರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ಸುಪ್ರಿಂಕೋರ್ಟ್ನ ಮಧ್ಯಪ್ರವೇಶದಿಂದ ಗ್ರಾಮೀಣ ಕೃಪಾಂಕ ನೌಕರರ ಪರಿಸ್ಥಿತಿ ಮತ್ತೆ ಅತಂತ್ರವಾಗಿದೆ. ಈ ಮುನ್ನ ನೌಕರಿ ಕಳಕೊಂಡ ಕೆಲವು ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ, ಅನೇಕ ಮಂದಿ ಮಾನಸಿಕ ಒತ್ತಡದಿಂದ ನರಳುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು