ಮದ್ಯೋದ್ಯಮಿ ಮಲ್ಯರ ಲೋಕಸಭಾ ಚುನಾವಣಾ ಟಾಪ್ ಗೇರ್ !
ಮದ್ಯೋದ್ಯಮಿ
ಮಲ್ಯರ
ಲೋಕಸಭಾ
ಚುನಾವಣಾ
ಟಾಪ್
ಗೇರ್
!
ಕಾಂಗ್ರೆಸ್
ಸಡಿಲ,
ಬಿಜೆಪಿ
ಅಬಲ.
ಹೀಗಾಗಿ
ಹೆಚ್ಚಲಿದೆ
ನಮ್ಮ
ಬಲ-
ಮಲ್ಯ
ರಾಜ್ಯಸಭಾ ಸದಸ್ಯರೂ ಆಗಿರುವ ಮಲ್ಯ ಶುಕ್ರವಾರ (ಡಿ. 12) ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು. ದೆಹಲಿಯಲ್ಲಿ ತಮ್ಮ ಪಕ್ಷ ಹಾಗೂ ಇತರೆ ಪಕ್ಷಗಳ ಚಟುವಟಿಕೆಗಳ ಬಗ್ಗೆ ಮಂಥನ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಪರ್ಯಾರವಾದ ಪಕ್ಷವೆಂದರೆ ಜನತಾ ಪಕ್ಷ ಒಂದೇ ಎಂದರು.
ಇತ್ತಾಚಿನ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಚತ್ತೀಸಗಢದಲ್ಲಿ ಬಿಜೆಪಿ ಗೆಲ್ಲಲು ಕಾರಣ ಆ ಪಕ್ಷದ ಅಲೆಯಲ್ಲ. ಯುವ ಜನತೆ ಆಡಳಿತದಲ್ಲಿ ಬದಲಾವಣೆ ಬಯಸಿರುವುದೇ ಬಿಜೆಪಿ ಗೆಲುವಿಗೆ ಕಾರಣ. ಆ ಮೂರೂ ರಾಜ್ಯಗಳಲ್ಲಿ ಬಿಜೆಪಿ ಸಂಘಟಿತವಾಗಿರುವ ಸ್ವರೂಪಕ್ಕೆ ಹೋಲಿಸಿದರೆ ಪ್ರತಿಶತ 5ರಷ್ಟೂ ಕರ್ನಾಟಕದಲ್ಲಿ ಸಂಘಟಿತವಾಗಿಲ್ಲ. ಕಾಂಗ್ರೆಸ್ಸಿನ ಬೇರುಗಳೂ ಸಡಿಲವಾಗಿವೆ. ಇದರ ಲಾಭ ಪಡೆಯುವ ಅವಕಾಶ ನಮ್ಮದಾಗಿದೆ ಎಂದು ಅಭಿಪ್ರಾಯ ಪಟ್ಟರು.
ವಿಲೀನಕ್ಕೆ ಸಿದ್ಧ, ಬೇಷರತ್ತಿಗೇ ಬದ್ಧ : ಅಖಿಲ ಭಾರತ ಪ್ರಗತಿಪರ ಜನತಾ ದಳ (ಎಐಪಿಜೆಡಿ) ದ ಕರ್ನಾಟಕದ ಘಟಕದ ಅಧ್ಯಕ್ಷ ಕೆ.ಎನ್.ನಾಗೇಗೌಡ ಕರ್ನಾಟಕ ಪ್ರಜಾಸತ್ತಾತ್ಮಕ ರಂಗ ರಚಿಸುವ ಪ್ರಸ್ತಾವನೆ ಇಟ್ಟಿದ್ದಾರಂತಲ್ಲ ಎಂಬ ಪ್ರಶ್ನೆಗೆ, ಮಾತುಕತೆಗೆ ಕೂತರೆ ಸಂತೋಷ. ಆದರೆ ಉಭಯ ಪಕ್ಷಗಳೂ ಬೇಷರತ್ತಾಗಿ ರಂಗ ರಚನೆ ಪ್ರಕ್ರಿಯೆಯಲ್ಲಿ ತೊಡಗಬೇಕಷ್ಟೆ ಎಂದು ಉತ್ತರಿಸಿದರು.
ಬೇರೆ ಪಕ್ಷಗಳಲ್ಲಿ ಮೂಲೆಗೆ ಸರಿದವರು ನಿಮ್ಮ ಪಕ್ಷ ಸೇರಬಯಸುತ್ತಿದ್ದಾರಲ್ಲ ಎಂದು ಕೆಣಕಿದಾಗ, ಹೊಸ ಬಾಟಲಿಗೆ ಹಳೇ ಹುಳಿ ಹೆಂಡ ತುಂಬಿಸುವ ಜಾಯಮಾನ ನನ್ನದಲ್ಲ ಎಂದು ‘ಮದ್ಯ’ಭಾಷೆಯಲ್ಲಿ ಪ್ರತಿಕ್ರಿಯಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಮಗ ರಾಜೇಶ್ ಗುಂಡೂರಾವ್ ಎಐಪಿಜೆಡಿಯಿಂದ ಜನತಾ ಪಕ್ಷಕ್ಕೆ ವಲಸೆ ಬಂದಿದ್ದು, ಪಕ್ಷದ ಯುವ ಘಟಕದ ಉಪಾಧ್ಯಕ್ಷರಾಗಿ ಮಲ್ಯ ಇವರಿಗೆ ಕೆಲಸ ವಹಿಸಿದ್ದಾರೆ. ಪಕ್ಷ ಸೇರಿದ ಇತರರ ಪೈಕಿ ಮಾಜಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪರಮೇಶ್ವರಪ್ಪ ಪ್ರಮುಖರು.
(ಪಿಟಿಐ)
ಮುಖಪುಟ / ವಾರ್ತೆಗಳು